ಕರ್ನಾಟಕ

karnataka

ETV Bharat / bharat

ನೀರವ್​​ ಮೋದಿಗೆ ಆರ್ಥಿಕ ಅಪರಾಧಿ ಎಂದ ಪಿಎಂಎಲ್​ಎ ನ್ಯಾಯಾಲಯ - ಪಿಎಂಎಲ್​ಎ ವಿಶೇಷ ನ್ಯಾಯಾಲಯ

ಪಂಜಾನ್​ ನ್ಯಾಷನಲ್​ ಬ್ಯಾಂಕ್​ನ ಹಗರಣದ ರೂವಾರಿಯಾಗಿರುವ ನೀರವ್​ ಮೋದಿಯನ್ನು ಆರ್ಥಿಕ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.

Neerav modi
ನೀರವ್​​ ಮೋದಿ

By

Published : Dec 5, 2019, 12:53 PM IST

ಮುಂಬೈ:ಪಂಜಾಬ್​​ ನ್ಯಾಷನಲ್​​ ಬ್ಯಾಂಕಿನ ಹಗರಣದ ಪ್ರಮುಖ ರೂವಾರಿ ನೀರವ್​ ಮೋದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಪಿಎಂಎಲ್​ಎ ವಿಶೇಷ ನ್ಯಾಯಾಲಯ ಘೋಷಿಸಿದೆ.

ದೇಶದಲ್ಲೇ ಅತೀ ದೊಡ್ಡ ಹಗರಣದಲ್ಲಿ, ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ ಹಗರಣವೂ ಒಂದಾಗಿದ್ದು, ಇದಕ್ಕೆ ಪ್ರಮುಖವಾದ ಹೊಣೆಗಾರ ನೀರವ್​ ಮೋದಿ. ಈ ಹಗರಣದ ನಂತರ ದೇಶ ಬಿಟ್ಟು ಇಂಗ್ಲೆಂಡ್​​ನಲ್ಲಿ ವಾಸಿಸುತ್ತಿದ್ದಾರೆ. ಇನ್ನು ಇತರ ಪ್ರಕರಣಗಳಲ್ಲಿ ಇಂಗ್ಲೆಂಡ್​ ಪೊಲೀಸರು ಅವರನ್ನು ಬಂಧಿಸಿತ್ತು. ಇದೀಗ ಅವರು ಜೈಲು ವಾಸವನ್ನೂ ಅನುಭವಿಸುತ್ತಿದ್ದಾರೆ. ಅವರ ಜಾಮೀನು ಅರ್ಜಿಯನ್ನ ಲಂಡನ್​​ನ ಕೋರ್ಟ್​ ನಿರಾಕರಿಸಿದೆ.

ಸದ್ಯ ಪಿಎಂಎಲ್​ಎ ವಿಶೇಷ ನ್ಯಾಯಾಲಯವು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದೆ. ಇದು ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್​​ಗಳಿಗೆ, ನೀರವ್​​ಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟಗೋಲು ಹಾಕಿಕೊಳ್ಳುಲು ಸಹಾಯಕವಾಗಲಿದೆ.

ABOUT THE AUTHOR

...view details