ನವದೆಹಲಿ: ಬುಧವಾರದಂದು ಸುಪ್ರೀಂ ಕೋರ್ಟ್ನಲ್ಲಿ ರಫೇಲ್ ತೀರ್ಪಿನ ಮೇಲ್ಮನವಿ ವೇಳೆ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳ್ಳತನವಾಗಿವೆ ಎನ್ನುವ ವಿಚಾರವನ್ನು ಕೇಂದ್ರ ಹೇಳಿದ್ದಕ್ಕೆ ರಾಹುಲ್ ಗಾಂಧಿ ಮತ್ತೆ ಗುಡುಗಿದ್ದಾರೆ.
ಅನಿಲ್ ಅಂಬಾನಿ ಲಾಭಕ್ಕಾಗಿ ರಫೇಲ್ ಖರೀದಿ ವ್ಯವಹಾರ ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.
ಇನ್ನು ವಾಯುದಾಳಿ ಬಗ್ಗೆ ಮಾತನಾಡಿದ ರಾಗಾ, ಈ ವಿಚಾರವಾಗಿ ಹೆಚ್ಚೇನು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಕೆಲ ಹುತಾತ್ಮರ ಕುಟುಂಬಗಳು ಆ ದಿನ ಏನಾಯಿತು ಎನ್ನುವ ಬಗ್ಗೆ ಕೇಳಿದ್ದಾರೆ ಎನ್ನುವ ವಿಚಾರ ಓದಿದ್ದೇನೆ ಎಂದರು.
ಲೋಕಸಭಾ ಚುನಾವಣೆಯ ಮೈತ್ರಿ ಸರಿಯಾಗಿ ಸಾಗುತ್ತಿದ್ದು, ದೆಹಲಿಯಲ್ಲಿ ಪಕ್ಷದ ಘಟಕ ಅವಿರೋಧವಾಗಿ ಮೈತ್ರಿ ಬೇಡ ಎಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.