ಕರ್ನಾಟಕ

karnataka

ETV Bharat / bharat

ತಮಿಳುನಾಡಿನ ಸಂಸ್ಕೃತಿ, ಭಾಷೆ, ಜನರ ಬಗ್ಗೆ ಪ್ರಧಾನಿ ಮೋದಿಗೆ ಗೌರವವಿಲ್ಲ: ರಾಹುಲ್​ ಗಾಂಧಿ - ರಾಹುಲ್​ ಗಾಂಧಿ ತಮಿಳುನಾಡು ಭೇಟಿ

ಜ.25ರ ವರೆಗೆ ತಮಿಳುನಾಡಿಗೆ ಮೂರು ದಿನಗಳ ಭೇಟಿಯಲ್ಲಿರುವ ರಾಹುಲ್​ ಗಾಂಧಿ, ಮೊದಲ ದಿನವಾದ ಇಂದು ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ.

Rahul Gandhi in Coimbatore
ಕೊಯಮತ್ತೂರಿನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

By

Published : Jan 23, 2021, 1:13 PM IST

ಕೊಯಮತ್ತೂರು: ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಗೌರವವಿಲ್ಲ ಎಂದು ಕೊಯಮತ್ತೂರಿನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆಪಾದಿಸಿದರು.

ಕೊಯಮತ್ತೂರಿನಲ್ಲಿ ರಾಹುಲ್​ ಗಾಂಧಿ ರೋಡ್ ಶೋ

ಇಂದಿನಿಂದ ಜ.25ರ ವರೆಗೆ ತಮಿಳುನಾಡಿಗೆ ಮೂರು ದಿನಗಳ ಭೇಟಿಯಲ್ಲಿರುವ ರಾಹುಲ್​ ಗಾಂಧಿ, ಮೊದಲ ದಿನ ಕೊಯಮತ್ತೂರಿಗೆ ಆಗಮಿಸಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿಯು ತಮ್ಮ ಆಲೋಚನೆಗಳು ಮತ್ತು ಸಂಸ್ಕೃತಿಯ ಅಧೀನದಲ್ಲಿರಬೇಕೆಂದು ಪಿಎಂ ಮೋದಿ ಭಾವಿಸುತ್ತಾರೆ ಎಂದರು.

ಇದನ್ನೂ ಓದಿ: ತಮಿಳುನಾಡು ರೈತರು, ಕಾರ್ಮಿಕರು, ನೇಕಾರರೊಂದಿಗೆ ಚರ್ಚಿಸಲಿರುವ ರಾಹುಲ್​ ಗಾಂಧಿ

'ನವ ಭಾರತ'ದಲ್ಲಿ ತಮಿಳುನಾಡಿನ ಜನರು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿರಬೇಕು ಎಂಬುದು ಮೋದಿಯ ಗ್ರಹಿಕೆ. ಈ ದೇಶದಲ್ಲಿ ಅನೇಕ ಭಾಷೆಗಳು ಮತ್ತು ಸಂಸ್ಕೃತಿಗಳಿವೆ. ತಮಿಳು, ಹಿಂದಿ, ಬಂಗಾಳಿ, ಇಂಗ್ಲಿಷ್​​ ಯಾವುದೇ ಇರಲಿ,​ ನಾವು ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕಿದೆ ಎಂದು ರಾಗಾ ಹೇಳಿದರು.

ABOUT THE AUTHOR

...view details