ನವದೆಹಲಿ:ವಿಶ್ವದ ಅತಿದೊಡ್ಡ ಆರ್ಥಿಕತೆ ದೇಶಗಳ ಸಂಘಟಿತ ಪ್ರಯತ್ನದಿಂದ ನಾವು ಕೊರೊನಾ ಸೋಂಕಿನಿಂದ ಬೇಗ ಚೇತರಿಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿ 15ನೇ ಜಿ -20 ಶೃಂಗಸಭೆಯಲ್ಲಿ ಹೇಳಿದ್ದಾರೆ.
ಸಂಘಟಿತ ಪ್ರಯತ್ನದಿಂದ ಕೊರೊನಾ ಹಿಮ್ಮೆಟ್ಟಿಸೋಣ: ಜಿ-20 ಶೃಂಗಸಭೆಯಲ್ಲಿ ಮೋದಿ ಕರೆ - PM modi talks in G-20 summit
ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾರತದ ಐಟಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಕೋವಿಡ್ ಬಳಿಕದ ಸನ್ನಿವೇಶವು ವರ್ಕ್ ಫ್ರಮ್ ಎನಿವೇರ್ ಎಂಬ ಪರಿಕಲ್ಪನೆಯನ್ನು ಸರಳಗೊಳಿಸಿದೆ ಎಂದಿದ್ದಾರೆ. ಸಂಘಟಿತ ಪ್ರಯತ್ನದಿಂದ ಕೊರೊನಾ ಹಿಮ್ಮೆಟ್ಟಿಸೋಣವೆಂದು ಅವರು ಕರೆ ನೀಡಿದ್ದಾರೆ.
![ಸಂಘಟಿತ ಪ್ರಯತ್ನದಿಂದ ಕೊರೊನಾ ಹಿಮ್ಮೆಟ್ಟಿಸೋಣ: ಜಿ-20 ಶೃಂಗಸಭೆಯಲ್ಲಿ ಮೋದಿ ಕರೆ pm-modi-attends-virtual-g-20-summit](https://etvbharatimages.akamaized.net/etvbharat/prod-images/768-512-9622173-thumbnail-3x2-news.jpg)
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾರತದ ಐಟಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಕೋವಿಡ್ ಬಳಿಕದ ಸನ್ನಿವೇಶವು ವರ್ಕ್ ಫ್ರಮ್ ಎನಿವೇರ್ ಎಂಬ ಪರಿಕಲ್ಪನೆಯನ್ನು ಸರಳಗೊಳಿಸಿದೆ. ಜಿ-20 ಸಮರ್ಥ ಕಾರ್ಯನಿರ್ವಹಣೆಗೆ ಡಿಜಿಟಲ್ ಸೌಲಭ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಭಾರತದ ಐಟಿ ಶಕ್ತಿಯನ್ನು ನೀಡಿದ್ದೇವೆ ಎಂದು ಮೋದಿ ಹೇಳಿದರು.
ತಂತ್ರಜ್ಞಾನ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಆಧರಿಸಿ ಹೊಸ ಜಾಗತಿಕ ಸೂಚ್ಯಂಕ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ. ಪ್ರತಿಭೆಗಳನ್ನು ಸೃಷ್ಟಿಸಲು ಬಹುಕೌಶಲ್ಯ ಮತ್ತು ಮರು-ಕೌಶಲ್ಯವು ಅಗತ್ಯ. ಇದರಿಂದ ಕಾರ್ಮಿಕರ ಘನತೆ ಮತ್ತು ಸ್ಥಿತಿಸ್ಥಾಪಕತ್ವವು ಹೆಚ್ಚುತ್ತದೆ. ಹೊಸ ತಂತ್ರಜ್ಞಾನಗಳು ಮಾನವೀಯತೆಗೆ ಎಷ್ಟರಮಟ್ಟಿಗೆ ಉಪಯುಕ್ತವಾಗಿವೆ ಎಂಬುದರ ಮೇಲೆ ಅದರ ಮೌಲ್ಯ ತಿಳಿಯಬಹುದು ಎಂದು ಮೋದಿ ಹೇಳಿದ್ದಾರೆ.