ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ಮತ್ತು 35(ಎ)ವಿಧಿಗಳನ್ನು ರದ್ದುಗೊಳಿಸಿದ ಬಗ್ಗೆ ನಟ/ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಪ್ರಾಯವನ್ನು ವಿಶೇಷ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಮೋದಿ- ಶಾ ಮಹಾಭಾರತದ ಕೃಷ್ಣಾರ್ಜುನರಂತೆ: ಸೂಪರ್ ಸ್ಟಾರ್ ರಜನಿ ಬಣ್ಣನೆ
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ "ಆಲಿಸುವುದು, ಕಲಿಯುವುದು ಮತ್ತು ಮುನ್ನಡೆಸುವುದು" (ಲಿಸನಿಂಗ್, ಲರ್ನಿಂಗ್ ಆ್ಯಂಡ್ ಲೀಡಿಂಗ್) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಜನಿಕಾಂತ್ ಮಾತನಾಡಿದರು.
ಸಾಂದರ್ಭಿಕ ಚಿತ್ರ
ಶಾ ಅವರಿಗೆ ಅಭಿನಂದನೆಗಳು. ‘ಮಿಷನ್ ಕಾಶ್ಮೀರ’ದ ನಡೆ ‘ಅದ್ಭುತ’ವಾಗಿದೆ. ನಮಗೆ ಕೃಷ್ಣ ಮತ್ತು ಅರ್ಜುನ ಯಾರು ಎಂಬುದು ತಿಳಿದಿಲ್ಲ. ಅದು ಅವರಿಗೆ ಮಾತ್ರ ತಿಳಿದಿದೆ (ಪ್ರಧಾನಿ ಮೋದಿ ಮತ್ತು ಅಮಿತ್ ಶಾ) ಎಂದಿದ್ದಾರೆ.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ "ಆಲಿಸುವುದು, ಕಲಿಯುವುದು ಮತ್ತು ಮುನ್ನಡೆಸುವುದು" (ಲಿಸಿನಿಂಗ್, ಲರ್ನಿಂಗ್ ಆ್ಯಂಡ್ ಲೀಡಿಂಗ್) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.