ಕರ್ನಾಟಕ

karnataka

ETV Bharat / bharat

ಉದ್ಧವ್​ ಠಾಕ್ರೆ ಸಲಹೆ ಅನುಷ್ಠಾನ ಮಾಡುವಂತೆ ಸಿಎಂಗಳಿಗೆ ಪ್ರಧಾನಿ ಸೂಚನೆ - COVID-19

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿಗೆ ಇವತ್ತು ಎಲ್ಲ ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

PM Modi Agrees With Uddhav Thackeray's Suggestion
PM Modi Agrees With Uddhav Thackeray's Suggestion

By

Published : Apr 2, 2020, 7:57 PM IST

ನವದೆಹಲಿ:ಕೊರೊನಾ ಸೋಂಕು ತಡೆಯುವ ಸಂಬಂಧ ಎಲ್ಲ ರಾಜ್ಯಗಳೂ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಈಗಾಗಲೇ ಸೂಚನೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯಾವುದೇ ಕಾರಣಕ್ಕೂ ಲಾಕ್​ಡೌನ್​​ ವಿಫಲವಾಗದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ತಿಳಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ವಿವಿಧ ರಾಜ್ಯಗಳಲ್ಲಿ ಪರಿಸ್ಥಿತಿಯ ಕುರಿತು ಅವಲೋಕಿಸಲು ಪ್ರಧಾನಿ ವಿಡಿಯೋ ಕಾನ್ಪರೆನ್ಸ್​ ಮೂಲಕ ಎಲ್ಲ ರಾಜ್ಯದ ಸಿಎಂಗಳ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿಗಳಿಂದ ಅಗತ್ಯ ಸಲಹೆಗಳನ್ನು ಸ್ವೀಕರಿಸಿದರು.

ಉದ್ಧವ್​ ಠಾಕ್ರೆ ಸಲಹೆ ಸ್ವೀಕರಿಸಿದ ನಮೋ

ಠಾಕ್ರೆ ಹೇಳಿದ್ದೇನು?

ಕೊರೊನಾ ವೈರಸ್​ ಹರಡುವುದನ್ನು ತಡೆಯಬೇಕಾದರೆ ವಿವಿಧ ಧರ್ಮದ ಮುಖಂಡರು ನಡೆಸುವ ದೊಡ್ಡ ಮಟ್ಟದ ಸಮಾರಂಭ, ಸಭೆಗಳಿಗೆ ಕಡಿವಾಣ​ ಹಾಕಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಮನವಿ ಮಾಡಬೇಕು. ಇದೇ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ವೇಳೆ ಇತರೆ ರಾಜ್ಯದ ಸಿಎಂಗಳಿಗೆ ತಿಳಿಸಿದ್ದು, ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.

ABOUT THE AUTHOR

...view details