ಕರ್ನಾಟಕ

karnataka

ETV Bharat / bharat

ಬಂಕ್‌​​ನಲ್ಲಿ ಕೆಲಸ, ಮನೆ ಮಾರಿ ಫೀಸ್‌ ಕಟ್ಟಿದ್ದು ಸಾರ್ಥಕ​.. UPSC ಪಾಸಾಗಿ ಅಪ್ಪನ ಗೌರವ ಹೆಚ್ಚಿಸಿದ ಮಗ! - ಪ್ರದೀಪ್​ ಸಿಂಗ್

ಮಧ್ಯಪ್ರದೇಶದ ಇಂದೋರ್​ನ ಪ್ರದೀಪ್​ ಸಿಂಗ್​ ಎಂಬ ಯುವಕನ ಕಥೆಯಿದು. ತಂದೆ ಪೆಟ್ರೋಲ್​ ಬಂಕ್‌​​ನಲ್ಲಿ ಕೆಲಸ ಮಾಡುತ್ತಿದ್ದ. ಮಗ ಓದಲೆಂದು ಮನೆ ಮಾರಿ ದುಡ್ಡು ಕೊಟ್ಟಿದ್ದ. ಆತನ ಶ್ರಮಕ್ಕೀಗ ಮಗ ತಕ್ಕ ಪ್ರತಿಫಲವನ್ನೇ ನೀಡಿದ್ದಾನೆ.

ಪ್ರದೀಪ್​ ಸಿಂಗ್​

By

Published : Apr 6, 2019, 8:37 PM IST

ಇಂದೋರ್​ : ಮನೆಯಲ್ಲಿ ಬಡತನವೇ ಹಾಸು ಹೊದ್ದು ಮಲಗಿತ್ತು.ಹಸಿವು ನೀಗಿಸಿಕೊಳ್ಳೋದೇ ಕಷ್ಟ. ಅಂಥದರಲ್ಲಿ ಐಎಎಸ್‌ ಪಾಸ್‌ ಮಾಡುವ ಕನಸು ಕಾಣೋಕೆ ಆಗುತ್ತಾ. ಆದರೆ, ಜನ್ಮ ಕೊಟ್ಟ ಅಪ್ಪ ಮಗನಿಗೆ ನಿಜಕ್ಕೂ ಹೀರೋವಂತಾಗಿದ್ದ. ಮಗ ಓದುವ ಕನಸಿಗೆ ನೀರೆರೆದಿದ್ದ.

ಯುಪಿಎಸ್​​ಸಿ ಪರೀಕ್ಷೆ ಪಾಸ್​ ಮಾಡಿ ಐಎಎಸ್‌ ಆಗ್ಬೇಕೆಂಬುದು ಯುವಕನ ಕನಸು. ಆದರೆ, ಬಡತನ ಯುವಕನ ಕನಸಿಗೆ ಅಡ್ಡಿಯಾಗಲೇ ಇಲ್ಲ. ಈಗ ಆತ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದ್ದಾನೆ. ಅದಕ್ಕೆ ಕಾರಣ ಅಪ್ಪ.. ಒನ್‌ ಅಂಡ್‌ ಒನ್ಲಿ ಅಪ್ಪ.

ಮಧ್ಯಪ್ರದೇಶದ ಇಂದೋರ್​ನ ಪ್ರದೀಪ್​ ಸಿಂಗ್ ಎಂಬ ಇನ್ನೂ ಮುಖದ ಮೇಲೆ ಸರಿಯಾಗಿ ಮೀಸೆಯೂ ಚಿಗುರದ ಹುಡುಗನ ಸ್ಟೋರಿ ಇದು.ತಂದೆ ಪೆಟ್ರೋಲ್​ ಬಂಕ್‌ನಲ್ಲಿ ಕೆಲಸ ಮಾಡಿ, ಹೇಗೋ ಮನೆ ನಡೆಸುತ್ತಿದ್ದರು. ಮಗ ಯುಪಿಎಸ್​ಸಿ ಪರೀಕ್ಷೆಗಾಗಿ ತರಬೇತಿ ಪಡೆದುಕೊಳ್ಳುವ ಆಸೆ ವ್ಯಕ್ತಪಡಿಸಿದ್ದ. ಮಗನ ಆಸೆಗೆ ತಣ್ಣೀರು ಹಾಕಲು ತಂದೆಗೆ ಇಷ್ಟವಿರಲಿಲ್ಲ. ಆದರೆ, ಮಗನಿಗೆ ನೀಡಲು ತಂದೆ ಬಳಿ ಹಣವಿರಲಿಲ್ಲ. ಈ ಮಧ್ಯೆ ಗಟ್ಟಿ ಧೈರ್ಯ ಮಾಡಿದ ತಂದೆ ಇರುವ ಮನೆ ಮಾರಾಟ ಮಾಡಿ ಮಗನ ಶುಲ್ಕ ಭರಿಸಿದ್ದ.

ಯಾರು ಈ ಪ್ರದೀಪ್​ ಸಿಂಗ್​!?
ಪ್ರದೀಪ್​ ಕೇವಲ 22 ವರ್ಷದ ಯುವಕ. 2017ರಲ್ಲಿ ಇಂದೋರ್​ನ ಅಹಿಲ್ಯಾ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದಾನೆ. ನವದೆಹಲಿಯಲ್ಲಿ ಯುಪಿಎಸ್​ಸಿ ಕೋಚಿಂಗ್​ ಪಡೆದುಕೊಂಡ ಪ್ರದೀಪ್‌, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ಸ್ಥಾನ ಗಿಟ್ಟಿಸಿದ್ದಾನೆ. 10ನೇ ವರ್ಗ ಹಾಗೂ ಸಿಬಿಎಸ್​ಸಿ ಪರೀಕ್ಷೆಯಲ್ಲಿ ಶೇ.81ರಷ್ಟು ಅಂಕ ಪಡೆದು ಪಾಸ್​ ಆಗಿದ್ದ ಈತನಿಗೆ ಮಹಿಳೆಯರ ಬಗ್ಗೆ ಹೆಚ್ಚು ಗೌರವವಂತೆ. ದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಂದೆಯ ಸಂಭ್ರಮ :
'ಪೆಟ್ರೋಲ್​ ಬಂಕ್‌​ನಲ್ಲಿ ಕೆಲಸ ಮಾಡುವ ನಾನು ಮಗನನ್ನ ಓದಿಸಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದೆ. ಆದರೆ, ಆತನ ಕೋಚಿಂಗ್​ ಶುಲ್ಕ ಭರಿಸುವ ಹಣ ನನ್ನ ಹತ್ತಿರ ಇರಲಿಲ್ಲ. ಪ್ರದೀಪ್​ ಯುಪಿಎಸ್​ಸಿಗಾಗಿ ತರಬೇತಿ ತೆಗೆದುಕೊಳ್ಳುವ ವಿಷಯ ನನ್ಮುಂದೆ ಹೇಳಿದಾಗ ಮನೆ ಮಾಡಿ ಆತನ ಖರ್ಚು ಭರಿಸಿದೆ. ಈಗ ಆತ ನೆಮ್ಮದಿಯ ಜೀವನ ನಡೆಸಬಹುದು ಎಂದು ಪ್ರದೀಪ್‌ ತಂದೆ ಹೇಳಿಕೊಂಡಿದ್ದಾರೆ. ಜತೆಗೆ ತಮ್ಮ ಮಗ ಮೊದಲ ಪ್ರಯತ್ನದಲೇ ಯುಪಿಎಸ್​ಸಿ ಪಾಸ್​ ಮಾಡಿದ್ದಕ್ಕೆ ಸಂಭ್ರಮಿಸಿದ್ದಾರೆ.

ABOUT THE AUTHOR

...view details