ಕರ್ನಾಟಕ

karnataka

By

Published : Jul 30, 2019, 5:53 PM IST

ETV Bharat / bharat

ಗಡಿಯಲ್ಲಿ ಗಲಾಟೆ: ಭಾರತೀಯ ಯೋಧ ಹುತಾತ್ಮ, ಪಾಕ್​ ಯೋಧರಿಗೆ ಗುಂಡು

ಕಣಿವೆ ನಾಡು ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಗುಂಡಿನ ಮೊರೆತ ನಡೆಯುತ್ತಿದ್ದು, ದಾಳಿಯಲ್ಲಿ ಇಬ್ಬರು ಪಾಕ್​​ ಯೋಧರನ್ನು ಹೊಡೆದುರುಳಿಸಲಾಗಿದ್ದು, ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮನಾಗಿದ್ದಾನೆ.

ಕಣಿವೆ ನಾಡಿನಲ್ಲಿ ಗುಂಡಿನ ದಾಳಿ

ಶ್ರೀನಗರ:ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಭಾರತ ಮತ್ತು ಪಾಕ್‌ ಸೈನಿಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಪಾಕ್​ ಯೋಧರನ್ನು ಹೊಡೆದುರುಳಿಸಲಾಗಿದೆ.

ಪಾಕಿಸ್ತಾನ ಯೋಧರು ಸುಂದರಬಾನಿ, ತಂಗ್ಧರ್ ಮತ್ತು ಕೇರನ್ ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದರು. ಈ ವೇಳೆ 34 ವರ್ಷದ ನಾಯ್ಕ್​ ಕೃಷ್ಣ ಲಾಲ್​ ಹುತಾತ್ಮರಾಗಿದ್ದಾರೆ. ಭಾರತೀಯ ಯೋಧರು ತಂಗ್ಧರ್ ಮತ್ತು ಕೇರನ್ ಗಡಿ ಪ್ರದೇಶದಲ್ಲಿ ಪ್ರತ್ಯುತ್ತರ ನೀಡಿ ಇಬ್ಬರು ಪಾಕ್‌ ಯೋಧರನ್ನು ಹೊಡೆದುರುಳಿಸಿದ್ದಾರೆ.

ABOUT THE AUTHOR

...view details