ಕರ್ನಾಟಕ

karnataka

By

Published : Apr 2, 2019, 12:14 PM IST

ETV Bharat / bharat

ಸತ್ತಿದ್ದು ಮೂವರು ಯೋಧರು ಎಂದ ಪಾಕ್​... ಹೇಳಿಕೆ ಅಲ್ಲಗಳೆದ ಭಾರತೀಯ ಸೇನೆ

ಪಾಕ್​ ಮಾಧ್ಯಮ ಪ್ರಕಟಣೆ ರಿಲೀಸ್ ಮಾಡ್ತಿದ್ದಂತೆ ಭಾರತೀಯ ಸೇನೆ ತನ್ನ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಹೇಳಿಕೆಯನ್ನು ಅಲ್ಲಗಳೆದಿರುವ ಇಂಡಿಯನ್ ಆರ್ಮಿ, ಗುಂಡಿನ ಚಕಮಕಿಯಲ್ಲಿ ಮೂರಕ್ಕಿಂತ ಹೆಚ್ಚು ಪಾಕ್ ಯೋಧರು ಅಸುನೀಗಿದ್ದಾರೆ ಎಂದಿದೆ.

ಭಾರತೀಯ ಸೇನೆ

ನವದೆಹಲಿ: ಗಡಿ ನಿಯಂತ್ರಣ ರೇಖೆಯ ರಾವಲ್​ಕೋಟ್​​ ಸೆಕ್ಟರ್​​ನಲ್ಲಿ ಭಾರತೀಯ ಸೇನೆ ಹಾಗೂ ಪಾಕ್ ಆರ್ಮಿ ನಡುವಿನ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಮೂವರು ಯೋಧರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.

ಪಾಕ್​ ಮಾಧ್ಯಮ ಪ್ರಕಟಣೆ ರಿಲೀಸ್ ಮಾಡ್ತಿದ್ದಂತೆ ಭಾರತೀಯ ಸೇನೆ ತನ್ನ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಹೇಳಿಕೆಯನ್ನು ಅಲ್ಲಗಳೆದಿರುವ ಇಂಡಿಯನ್ ಆರ್ಮಿ, ಗುಂಡಿನ ಚಕಮಕಿಯಲ್ಲಿ ಮೂರಕ್ಕಿಂತ ಹೆಚ್ಚು ಪಾಕ್ ಯೋಧರು ಅಸುನೀಗಿದ್ದಾರೆ ಎಂದಿದೆ.

ಪೂಂಚ್​ ಸೆಕ್ಟರ್​​ನಲ್ಲಿ ಪಾಕ್ ಸೇನೆ ಶೆಲ್ಲಿಂಗ್ ದಾಳಿ ಹಾಗೂ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಬಂದಿದೆ. ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಜೌರಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details