ಕರ್ನಾಟಕ

karnataka

By

Published : Jan 25, 2021, 9:15 PM IST

Updated : Jan 25, 2021, 10:43 PM IST

ETV Bharat / bharat

ಬಿಎಂ ಹೆಗ್ಡೆಗೆ ಪದ್ಮವಿಭೂಷಣ, ಚಂದ್ರಶೇಖರ್ ಕಂಬಾರ್​ಗೆ ಪದ್ಮಭೂಷಣ ಗೌರವ

Padma Winners
Padma Winners

21:14 January 25

ಪ್ರಧಾನಿ ಮೋದಿ ಅಭಿನಂದನೆ ಟ್ವೀಟ್​

ನವದೆಹಲಿ:72ನೇ ಗಣರಾಜ್ಯೋತ್ಸವ ಮುನ್ನಾದಿನ ವಿವಿಧ ಗಣ್ಯರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಅತ್ಯುನ್ನತ ಗೌರವ ಪ್ರಶಸ್ತಿ ನೀಡಲಾಗಿದೆ.  

ವೈದ್ಯಕೀಯ ವಿಭಾಗದಲ್ಲಿ ರಾಜ್ಯದ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಪದ್ಮವಿಭೂಷಣ, ಸಾಹಿತ್ಯ ಹಾಗೂ ಶಿಕ್ಷಣಕ್ಕಾಗಿ ಡಾ. ಚಂದ್ರಶೇಖರ​ ಕಂಬಾರ​​ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಘೋಷಣೆ ಮಾಡಲಾಗಿದೆ.  

7 ಸಾಧಕರಿಗೆ ಪದ್ಮವಿಭೂಷಣ, 10 ಗಣ್ಯರಿಗೆ ಪದ್ಮ ಭೂಷಣ ಹಾಗೂ  ವಿವಿಧ ಕ್ಷೇತ್ರದ 102 ಸಾಧಕರಿಗೆ ಪದ್ಮಶ್ರೀ ಗೌರವ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ (ಮರಣೋತ್ತರ) ನೀಡಲಾಗಿದೆ.  

ಪದ್ಮವಿಭೂಷಣ ಗೌರವ ಪಡೆದ ಗಣ್ಯರು

ಶಿಂಜೋ ಅಬೆ (ಜಪಾನ್ ಮಾಜಿ ಪ್ರಧಾನಿ) 

ಎಸ್​ಪಿ ಬಾಲಸುಬ್ರಹ್ಮಣ್ಯಂ (ಕಲೆ, ಮರಣೋತ್ತರ)

ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ವೈದ್ಯಕೀಯ)

ನರೀಂದರ್​ ಸಿಂಗ್ ಕಪನಿ (ವಿಜ್ಞಾನ & ಎಂಜನಿಯರಿಂಗ್​, ಮರಣೋತ್ತರ)

ಮೌಲಾನ್​ ವಹಿದುದ್ದೀನ್ ಖಾನ್​ (ಆದ್ಯಾತ್ಮ)

ಬಿಬಿ ಲಾಲ್ (ಪ್ರಾಚ್ಯವಸ್ತು ಶಾಸ್ತ್ರ)

ಸುದರ್ಶನ್​ ಸಾಹು (ಕಲೆ)

ಪದ್ಮ ಭೂಷಣ ಗೌರವ

ಕೃಷ್ಣನ್​ ನಾಯರ್​ ಶಾಂತಕುಮಾರಿ ಚಿತ್ರಾ (ಕಲೆ)

ತರುಣ್​ ಗೋಗೊಯ್​ (ಸಾರ್ವಜನಿಕ ಸೇವೆ)

ಚಂದ್ರಶೇಖರ್ ಕಂಬಾರ (ಸಾಹಿತ್ಯ & ಶಿಕ್ಷಣ)

ಸುಮಿತ್ರಾ ಮಹಾಜನ್​ (ಸಾರ್ವಜನಿಕ ಸೇವೆ)

ನೃಪೇಂದ್ರ ಮಿಶ್ರಾ (ನಾಗರಿಕ ಸೇವೆ)

ರಾಮವಿಲಾಸ್​ ಪಾಸ್ವಾನ್​ (ಸಾರ್ವಜನಿಕ ಸೇವೆ, ಮರಣೋತ್ತರ)

ಕೇಶುಬಾಯಿ ಪಟೇಲ್ ​(ಸಾರ್ವಜನಿಕ ಸೇವೆ, ಮರಣೋತ್ತರ)

ಕಲ್ಬೆ ಸಾಧಿಕ್​ (ಆಧ್ಯಾತ್ಮ)

ರಜನಿಕಾಂತ್​ ದೇವಿದಾಸ್​ ಶ್ರಾಫ್​ (ವಾಣಿಜ್ಯ & ಕೈಗಾರಿಕೆ)

ತರಲೋಚನ್​ ಸಿಂಗ್​ (ಸಾರ್ವಜನಿಕ ಸೇವೆ)

ಕರ್ನಾಟಕದ ಮೂವರಿಗೆ ಪದ್ಮಶ್ರೀ

ಜೋಗತಿ ಮಂಜಮ್ಮ (ಪದ್ಮಶ್ರೀ, ಕಲೆ)

ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ​(ಸಾಹಿತ್ಯ ಮತ್ತು ಶಿಕ್ಷಣ)

ಕೆ.ವೈ. ವೆಂಕಟೇಶ್ (ಕ್ರೀಡೆ)

Last Updated : Jan 25, 2021, 10:43 PM IST

ABOUT THE AUTHOR

...view details