ಕರ್ನಾಟಕ

karnataka

3.4 ಲಕ್ಷ ಉತ್ತರ ಪ್ರದೇಶದ ರೈತರ ಖಾತೆಗಳಿಗೆ 113 ಕೋಟಿ ರೂ. ವರ್ಗಾವಣೆ ಮಾಡಿದ ಯೋಗಿ ಆದಿತ್ಯನಾಥ್

By

Published : Oct 22, 2020, 5:00 PM IST

Updated : Oct 22, 2020, 6:00 PM IST

ಪ್ರವಾಹ ಪೀಡಿತ ಜಿಲ್ಲೆಗಳ 3,48,511 ರೈತರ ಖಾತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 113.21 ಕೋಟಿ ರೂ. ಜಮಾವಣೆ ಮಾಡಿದ್ದಾರೆ. ನಷ್ಟವನ್ನು ಸರಿದೂಗಿಸಲು ಅವರು ಆನ್‌ಲೈನ್ ಪಾವತಿ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ (ಉತ್ತರ ಪ್ರದೇಶ): ರಾಜ್ಯದ 19 ಪ್ರವಾಹ ಪೀಡಿತ ಜಿಲ್ಲೆಗಳ 3,48,511 ರೈತರ ಖಾತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 113.21 ಕೋಟಿ ರೂ. ಜಮಾವಣೆ ಮಾಡಿದ್ದಾರೆ.

ಮಳೆಯಲ್ಲಿ ನಾಶವಾದ ಬೆಳೆಗಳ ನಷ್ಟ ಸರಿದೂಗಿಸಲು ಅವರು ಆನ್‌ಲೈನ್ ಪಾವತಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಮ್‌ಒ) ತಿಳಿಸಿದೆ.

"ನಿಮ್ಮ ಕಠಿಣ ಪರಿಶ್ರಮ ಮತ್ತು ಹಾನಿಗೆ ಹೋಲಿಸಿದರೆ ಇದು ಬಹಳ ಕಡಿಮೆ ಮೊತ್ತವಾಗಿದ್ದರೂ, ಇದು ನಿಮ್ಮ ಹಿತಾಸಕ್ತಿಗಾಗಿ ನಮ್ಮ ಬದ್ಧತೆಯ ಪುರಾವೆಯಾಗಿದೆ" ಎಂದು ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈತರನ್ನುದ್ದೇಶಿಸಿ ಹೇಳಿದರು.

"ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯ ಡಿಎಂಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ರೈತರನ್ನು ಯಾರು ಶೋಷಿಸುತ್ತಾರೋ ಅವರಿಗೆ ಶಿಕ್ಷೆಯಾಗುತ್ತದೆ. ಕೇಂದ್ರ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರಗಳು ಪಿಎಂ ನೀರಾವರಿ, ಪಿಎಂ ಬೆಳೆ ವಿಮೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಮುಂತಾದ ಹಲವಾರು ಯೋಜನೆಗಳನ್ನು ನಡೆಸುತ್ತಿವೆ" ಎಂದು ಅವರು ಹೇಳಿದರು.

ಪ್ರವಾಹ ಸಮಸ್ಯೆಗೆ ಸರ್ಕಾರ ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ ಮತ್ತು ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

Last Updated : Oct 22, 2020, 6:00 PM IST

ABOUT THE AUTHOR

...view details