ನವದೆಹಲಿ:ಇನ್ಮುಂದೆ ಭಾರತದ ಕಲ್ಲಿದ್ದಲು ಉದ್ಯಮಗಳಲ್ಲಿ ಸ್ಥಳೀಯ ಹಾಗೂ ವಿದೇಶಿ ಪಾಲುದಾರಿಕೆ ಸಾಧ್ಯತೆ ಪೂರ್ಣ ಪ್ರಮಾಣದಲ್ಲಿ ಇರಲಿದೆ. ಈ ಕುರಿತಂತೆ ಇದ್ದ ಕೆಲವು ಷರತ್ತುಗಳನ್ನು ಕೇಂದ್ರ ಬಿಜೆಪಿ ಸರ್ಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಸುಗ್ರಿವಾಜ್ಞೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಮೂಲಕ ಜಾಗತಿಕ ಕಂಪನಿಗಳಿಗೆ ಅವಕಾಶ ನೀಡಲಾಗಿದ್ದು ಸ್ಥಳೀಯ ಕಂಪನಿಗಳಂತೆ ವಿದೇಶಿ ಕಂಪನಿಗಳೂ ಕೂಡಾ ಪೂರ್ಣ ಪ್ರಮಾಣದಲ್ಲಿ ಹೂಡಬಹುದಾಗಿದೆ. ಈ ನಿರ್ಧಾರದಿಂದ ಕೋಲ್ ಇಂಡಿಯಾಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿಗಾರಿಕೆ ಸಚಿವ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಈ ಮಹತ್ತರ ಬದಲಾವಣೆಗೆ ಕೇಂದ್ರ ಕ್ಯಾಬಿನೆಟ್ ಖನಿಜಗಳ ಕಾನೂನು ತಿದ್ದುಪಡಿ ಸುಗ್ರಿವಾಜ್ಞೆಯನ್ನು ಅಂಗೀಕರಿಸಿದೆ. ಈ 2015 ಮೂಲಕ ಕಲ್ಲಿದ್ದಲು ಗಣಿಗಾರಿಕೆಯ ವಿಶೇಷ ನಿಬಂಧನೆಗಳ ಕಾಯ್ದೆಯನ್ನು ಹಾಗೂ ಗಣಿಗಳು ಹಾಗೂ 1957ರ ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯು ಕಲ್ಲಿದ್ದಲು ಗಣಿಗಾರಿಕೆ ಮೇಲೆ ಮಾತ್ರವಲ್ಲದೇ ಇದೇ ವರ್ಷದ ಮಾರ್ಚ್ನಲ್ಲಿ ನಡೆಯಲಿರುವ ಕಬ್ಬಿಣದ ಅದಿರಿನ ಹರಾಜು ಪ್ರಕ್ರಿಯೆಯಲ್ಲೂ ಕೂಡಾ ಪರಿಣಾಮ ಬೀರಲಿದೆ.
ಈ ಸುಗ್ರೀವಾಜ್ಞೆಯ ಕಾರಣದಿಂದ ಮುಂದಿನ ಬಜೆಟ್ ಹಾಗೂ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯ ಮೇಲೂ ಕೂಡಾ ಪ್ರಭಾವಿಸಲಿದೆ. ಇದೇ ತಿಂಗಳಲ್ಲಿ ನಡೆಯಲಿರುವ ಕಲ್ಲಿದ್ದಲು ಗಣಿಗಳ ಹರಾಜಿಗೆ ಹೊಸ ಹುರುಪು ನೀಡಲಿದ್ದು ಹೂಡಿಕೆದಾರರಿಗೆ ಉತ್ಸಾಹ ತುಂಬಲಿದೆ.