ಮುಜಾಫರ್ಪುರ್(ಬಿಹಾರ): ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾದ ಪರಿಣಾಮ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಸ್ವಾನ್ ವಿರುದ್ಧ ಮುಜಫರ್ಪುರ್ ಸಿವಿಲ್ ಕೋರ್ಟ್ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಈರುಳ್ಳಿ ಬೆಲೆ ಏರಿಕೆ.. ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು! - ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್
ಈರುಳ್ಳಿ ಬೆಲೆ ಏರಿಕೆಯಾದ ಪರಿಣಾಮ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸೆಕ್ಷನ್ 420, 506, 379 ಅಡಿಯಲ್ಲಿ ದೂರು ದಾಖಲಾಗಿದೆ.
![ಈರುಳ್ಳಿ ಬೆಲೆ ಏರಿಕೆ.. ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು! ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಕ್ರಿಮಿನಲ್ ಕೇಸ್,Case filed against Union Minister Ram Vilas Paswan](https://etvbharatimages.akamaized.net/etvbharat/prod-images/768-512-5303766-thumbnail-3x2-brm.jpg)
ರಾಮ್ ವಿಲಾಸ್ ಪಾಸ್ವಾನ್
ಸಾಮಾಜಿಕ ಕಾರ್ಯಕರ್ತ ಎಂ.ರಾಜು ನಾಯ್ಯರ್ ಎಂಬುವವರು ಮುಜಫರ್ಪುರ್ ಸಿವಿಲ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದು ಇದೇ ಡಿಸೆಂಬರ್ 12ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಚಿವರಾಗಿದ್ದರೂ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಲ್ಲಿ ಪಾಸ್ವಾನ್ ವಿಫಲರಾಗಿದ್ದಾರೆ. ಬ್ಲಾಕ್ ಮಾರ್ಕೆಟ್ನಿಂದಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ ಎಂದು ಪಾಸ್ವಾನ್ ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಕ್ಷನ್ 420, 506, 379 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.