ಕರ್ನಾಟಕ

karnataka

ETV Bharat / bharat

ಕೆಳ ನ್ಯಾಯಾಲಯದಲ್ಲೂ ಸಿಗಲಿಲ್ಲ  ಚಿದಂಬರಂಗೆ ಜಾಮೀನು... ಸಿಬಿಐ ಕಸ್ಟಡಿಗೆ ಮಾಜಿ ಗೃಹಸಚಿವ - ಸಿಬಿಐ ವಶಕ್ಕೆ ಚಿದಂಬರಂ

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನ ವಿಶೇಷ ನ್ಯಾಯಾಲಯ ಒಂದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

ಪಿ.ಚಿದಂಬರಂ

By

Published : Sep 2, 2019, 6:14 PM IST

ನವದೆಹಲಿ:ಐಎನ್​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನ ವಿಶೇಷ ನ್ಯಾಯಾಲಯ ಒಂದು ದಿನ ಸಿಬಿಐ ವಶಕ್ಕೆ ನೀಡಿದೆ.

ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿದ್ದರಿಂದ ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿ ಸಿಬಿಐ ಮನವಿ ಪುರಸ್ಕರಿಸಿದ ನ್ಯಾಯಾಲಯ ಒಂದು ದಿನ ಸಿಬಿಐ ವಶಕ್ಕೆ ನೀಡಿದೆ.

ಅಲ್ಲದೆ ಪ್ರಕರಣ ಸಂಬಂಧ ಚಿದಂಬರಂ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನ ನಾಳೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ವಿತ್ತ ಸಚಿವ ಚಿದಂಬರಂ ಅವರನ್ನು ಸಿಬಿಐ ಆಗಸ್ಟ್ 21ರ ರಾತ್ರಿ ಬಂಧಿಸಿತ್ತು. ಆ ಬಳಿಕ ಎರಡು ಬಾರಿ ತಲಾ ಐದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.

ABOUT THE AUTHOR

...view details