ಕರ್ನಾಟಕ

karnataka

By

Published : Dec 12, 2020, 4:17 PM IST

ETV Bharat / bharat

ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಂದ ಕೋಟಿ ರೂ ಮೌಲ್ಯದ ಬಂಗಾರ ವಶ

ವಿದೇಶದಿಂದ ಆಗಮಿಸಿದ ಮೂವರು ಪ್ರಯಾಣಿಕರಿಂದ ಸುಮಾರು 2.1 ಕೆ.ಜಿ ತೂಕದ, 1.07 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನವನ್ನು ತಿರುಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

Tamil Nadu
ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ತಮಿಳುನಾಡು:ಸಿಂಗಾಪುರ ಮತ್ತು ದುಬೈನಿಂದ ಆಗಮಿಸಿದ ಪ್ರಯಾಣಿಕರಿಂದ 1.07 ಕೋಟಿ ರೂ ಮೌಲ್ಯದ ಚಿನ್ನವನ್ನು ತಿರುಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ತಿರುಚ್ಚಿಯ ವಾಯು ಗುಪ್ತಚರ ಘಟಕವು ಮೂವರು ಪ್ರಯಾಣಿಕರಿಂದ ಇಷ್ಟೊಂದು ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಕ ಈ ಪ್ರಯಾಣಿಕರು ದುಬೈ ಮತ್ತು ಸಿಂಗಾಪುರದಿಂದ ಆಗಮಿಸಿದ್ದರು.

ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸುವಾಗ, ಓರ್ವನ ಅನುಮಾನಾಸ್ಪದ ರೀತಿಯ ವರ್ತನೆ ಹಾಗೂ ಆತ ಏನನ್ನೋ ಮರೆಮಾಚುತ್ತಿರುವ ರೀತಿ ಕಂಡುಬಂದ ಕಾರಣ ಆತನನ್ನು ತಕ್ಷಣ ಪರಿಶೀಲಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತ ಪ್ರಾಥಮಿಕ ತನಿಖೆಯಲ್ಲಿ ಕಡಲೂರು ಮೂಲದ ಸುರೇಶ್, ನಾಗಪಟ್ಟಿನಂನ ಮೊಹಮ್ಮದ್ ಸಾದಿಕ್ ಹಾಗೂ ತಂಜಾವೂರಿನ ಮುಹಮ್ಮದ್ ಜಿಯಾವುದ್ದೀನ್ ಸಾಕಿಬ್ ಆರೋಪಿಗಳು ಎಂದು ಗುರುತಿಸಲಾಗಿದೆ.

ಓದಿ:ಪ್ರಯಾಣಿಕರ ಜೀನ್ಸ್‌ ಪ್ಯಾಂಟ್‌, ಒಳಉಡುಪುಗಳಲ್ಲಿತ್ತು 56 ಲಕ್ಷ ಮೌಲ್ಯದ ಚಿನ್ನ!

ABOUT THE AUTHOR

...view details