ಕರ್ನಾಟಕ

karnataka

By

Published : Aug 2, 2019, 11:03 PM IST

ETV Bharat / bharat

ಅಮರನಾಥ​ ಯಾತ್ರೆ ರದ್ದು ಬೆನ್ನಲ್ಲೇ ಉಗ್ರರ ಅಟ್ಟಹಾಸ: ಗುಂಡಿನ ದಾಳಿಗೆ ಯೋಧ ಹುತಾತ್ಮ

ಅಮರನಾಥ ಯಾತ್ರೆ ರದ್ಧು ಬೆನ್ನಲ್ಲೇ ಉಗ್ರರು ಬಾಲ ಬಿಚ್ಚಿದ್ದು, ಭಯೋತ್ಪಾದಕರು-ಭಾರತೀಯ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಅಮರನಾಥ್​ ಯಾತ್ರೆ  ರದ್ದು

ಶ್ರೀನಗರ:ಅಮರನಾಥ​ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಗ್ಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆ ಹಿತದೃಷ್ಠಿಯಿಂದ ಯಾತ್ರೆಯನ್ನು ದಿಢೀರ್​ ರದ್ಧುಗೊಳಿಸಲಾಗಿದೆ. ಇದ್ರ ಜೊತೆಗೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಶೋಫಿಯಾನ್​ ಬಳಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. 34 ರಾಷ್ಟ್ರೀಯ ರೈಫಲ್ಸ್​​ನ ಯೋಧ ಹುತಾತ್ಮರಾಗಿದ್ದಾರೆ.

ಘಟನೆಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಉಗ್ರನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ABOUT THE AUTHOR

...view details