ನವದೆಹಲಿ: ರಾಷ್ಟ್ರರಾಜಧಾನಿಯ ಗಡಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇಂದು ಲೋಹ್ರಿ ಹಬ್ಬವಾಗಿದ್ದು, ಎಲ್ಲ ಕಡೆ ಕೃಷಿ ಕಾನೂನು ಪ್ರತಿಗಳನ್ನು ದಹಿಸಿ ಹಬ್ಬ ಆಚರಿಸುವುದಾಗಿ ರೈತ ಮುಖಂಡರು ಹೇಳಿದ್ದಾರೆ.
ವರ್ಷದ ಆರಂಭದಲ್ಲಿ ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬವನ್ನು ಹೆಚ್ಚಾಗಿ ಆಚರಿಸಲಾಗುತ್ತದೆ. ಇದು ದೀಪೋತ್ಸವಗಳಿಗೆ ಹೆಸರುವಾಸಿಯಾದ ಹಬ್ಬವಾಗಿದೆ. ಇಂದು ಸಂಜೆ ಪ್ರತಿಭಟನೆ ನಡೆಯುತ್ತಿರುವ ಎಲ್ಲ ಸ್ಥಳಗಳಲ್ಲಿ ಕೃಷಿ ಕಾಯ್ದೆಯ ಪ್ರತಿಗಳನ್ನು ಸುಟ್ಟು ಹಬ್ಬ ಆಚರಿಸುವುದಾಗಿ ರೈತ ಮುಖಂಡ ಮಂಜೀತ್ ಸಿಂಗ್ ಹೇಳಿದ್ದಾರೆ.