ಕರ್ನಾಟಕ

karnataka

By

Published : Nov 4, 2020, 5:24 PM IST

Updated : Nov 4, 2020, 5:30 PM IST

ETV Bharat / bharat

ಪಟಾಕಿ ಸಿಡಿಸುವುದು, ಮಾರಾಟ ಬ್ಯಾನ್​ ಮಾಡಿದ ಒಡಿಶಾ ಸರ್ಕಾರ!

ಕೋವಿಡ್​ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚಾಗಿ ಜನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ, ಒಡಿಶಾದಲ್ಲಿ ಇದರ ಮಾರಾಟ ಬ್ಯಾನ್​ ಮಾಡಲಾಗಿದೆ.

Odisha govt bans sale
Odisha govt bans sale

ಭುವನೇಶ್ವರ: ದೀಪಗಳ ಹಬ್ಬ ದೀಪಾವಳಿ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಈ ಸಲ ಪರಿಸರ ಪ್ರೇಮಿ ದೀಪಾವಳಿ ಆಚರಣೆ ಮಾಡಲು ಕೆಲವೊಂದು ರಾಜ್ಯಗಳು ಮಹತ್ವದ ನಿರ್ಧಾರ ಕೈಗೊಳ್ಳುತ್ತಿವೆ.

ರಾಜಸ್ಥಾನದಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಾರಾಟ ಮಾಡುವುದು ಈಗಾಗಲೇ ನಿಷೇಧ ಮಾಡಲಾಗಿದ್ದು, ಇದರ ಬೆನ್ನಲ್ಲೇ ಇದೀಗ ಒಡಿಶಾ ಸರ್ಕಾರ ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ನವೆಂಬರ್ 10ರಿಂದ 30ರವರೆಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸುಡುವುದರ ಮೇಲೆ ನಿರ್ಬಂಧ ಹಾಕಿದೆ.

ಒಂದು ವೇಳೆ ಯಾರಾದರೂ ಈ ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಪರಿಸರ ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚಾಗಿ ಜನರಿಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಇನ್ನು ಕರ್ನಾಟಕದಲ್ಲೂ ಪಟಾಕಿ ಸಿಡಿಸುವುದನ್ನ ಬ್ಯಾನ್ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Last Updated : Nov 4, 2020, 5:30 PM IST

ABOUT THE AUTHOR

...view details