ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಐತಿಹಾಸಿಕ ಆಗ್ರಾ ಜಿಲ್ಲೆಯ ಹೆಸರನ್ನು ಬದಲಾಯಿಸಲು ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸರ್ಕಾರ ಈ ನಿಟ್ಟಿನಲ್ಲಿ ಅಲ್ಲಿನ ಡಾ. ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ತಜ್ಞರ ಸಲಹೆ ಕೋರಿದೆ ಎನ್ನಲಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಆಗ್ರಾ ಹೆಸರಿನ ಐತಿಹಾಸಿಕ ಅಂಶವನ್ನು ಪರಿಶೀಲಿಸುವಂತೆಯೂ ಕೇಳಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿನ ಇತಿಹಾಸ ವಿಭಾಗವು ಇದೀಗ ಈ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ.
ತಾಜ್ ಮಹಲ್ (ಸಂಗ್ರಹ ಚಿತ್ರ) ಮೂಲಗಳ ಪ್ರಕಾರ ಆಗ್ರಾವನ್ನು ಮೊದಲು ಅಗ್ರಾವಾನ್ ಎಂದು ಕರೆಯಲಾಗುತ್ತಿತ್ತಂತೆ. ಅಗ್ರವಾನ್ ಎಂಬ ಹೆಸರು ಇರುವುದಾಗಿ ತಿಳಿದು ಬಂದಿದ್ದರಿಂದ ಸರ್ಕಾರ ಇದನ್ನೇ ಇಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ, ಅಗ್ರವಾನ್ ಹೆಸರನ್ನು ಆಗ್ರಾ ಎಂದು ಬದಲಾಯಿಸಿದ್ದು ಯಾವಾಗ ಮತ್ತೆ ಏಕೆ ಎಂಬ ಅಂಶವನ್ನು ತಿಳಿದುಕೊಳ್ಳಲು ಸರ್ಕಾರ ಇತಿಹಾಸಕಾರರ ಮೊರೆ ಹೋಗಿದೆ.
ತಾಜ್ ಮಹಲ್ (ಸಂಗ್ರಹ ಚಿತ್ರ) ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿತ್ತು. ಬಳಿಕ ಐತಿಹಾಸಿಕ ಮೊಘಲ್ ಸರಾಯ್ ರೈಲು ನಿಲ್ದಾಣವನ್ನು ದೀನ್ ದಯಾಳ್ ಉಪಾಧ್ಯಾಯ ಎಂದು ಮರು ನಾಮಕರಣ ಮಾಡಲಾಯಿತ್ತು. ಇದೀಗ ಯೋಗಿ ಆದಿತ್ಯನಾಥ್ ಸರ್ಕಾರ ಆಗ್ರಾದತ್ತ ಮುಖ ಮಾಡಿದೆ.