ಕರ್ನಾಟಕ

karnataka

By

Published : Aug 12, 2019, 9:05 AM IST

ETV Bharat / bharat

ಈ ಬಾರಿ ಮುಂಗಾರು ಭರಪೂರ... ಈ ರಾಜ್ಯಗಳಿಗೆ ವರುಣನ ಅವಕೃಪೆ..!

ಜೂನ್​ನಲ್ಲಿ ಮಳೆ ಕೊರತೆ ಅನುಭವಿಸಿದ್ದರೂ ದೇಶದಲ್ಲಿ ಪ್ರಸ್ತುತ ಮಾನ್ಸೂನ್​​ನಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮಳೆ

ನವದೆಹಲಿ:ಜೂನ್​ ಮೊದಲ ವಾರದಲ್ಲಿ ಮುಂಗಾರು ಆಗಮನವಾಗಲಿದೆ ಎಂದಿದ್ದ ಹವಾಮಾನ ಇಲಾಖೆ ಮಾತು ಸುಳ್ಳಾಗಿತ್ತು. ಕೊಂಚ ತಡವಾಗಿಯೇ ದೇಶವನ್ನು ವ್ಯಾಪಿಸಿದ್ದ ಮಾನ್ಸೂನ್ ಇದೀಗ ತನ್ನ ಭೀಕರತೆಯನ್ನು ಪ್ರದರ್ಶಿಸಿದೆ.

ಜೂನ್​ನಲ್ಲಿ ಮಳೆ ಕೊರತೆ ಅನುಭವಿಸಿದ್ದರೂ ದೇಶದಲ್ಲಿ ಪ್ರಸ್ತುತ ಮಾನ್ಸೂನ್​​ನಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೂನ್ ಅಂತ್ಯಕ್ಕೆ ಶೇ.33ರಷ್ಟು ದೇಶದಲ್ಲಿ ಮಳೆಯ ಕೊರತೆಯಾಗಿತ್ತು. ಆದರೆ, ಆಗಸ್ಟ್ 10ರ ಅಂತ್ಯಕ್ಕೆ ಈ ಪ್ರಮಾಣ ಶೇ.0 ಆಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸದ್ಯ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ಕೇರಳದಲ್ಲಿ ಮಳೆ ಅಬ್ಬರಿಸುತ್ತಿದ್ದು, ಮಾನ್ಸೂನ್ ಮೊದಲ ತಿಂಗಳಿನ ಕೊರತೆಯನ್ನು ನೀಗಿಸಿದೆ. ಮಹಾರಾಷ್ಟ್ರದಲ್ಲಿ ಶೇ.161, ತೆಲಂಗಾಣ ಶೇ.148, ಕರ್ನಾಟಕ ಶೇ.128 ಹಾಗೂ ಗುಜರಾತ್​​ನಲ್ಲಿ ಶೇ.112ರಷ್ಟು ಮಳೆ ಸುರಿದಿದ್ದರೆ, ದೆಹಲಿ ಶೇ.43, ತ್ರಿಪುರಾ ಶೇ.69, ಮೇಘಾಲಯ ಶೇ.60 ಹಾಗೂ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್​ ರಾಜ್ಯಗಳಲ್ಲಿ ಶೇ.42ರಷ್ಟು ಮಳೆ ಸುರಿದಿದ್ದು, ಈ ರಾಜ್ಯಗಳು ಮಾನ್ಸೂನ್​​ ಅವಕೃಪೆಗೆ ಒಳಗಾಗಿವೆ.

ABOUT THE AUTHOR

...view details