ಬೀಜಿಂಗ್ (ಚೀನಾ):ಲಡಾಖ್ನ ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಕೆಲ ದಿನಗಳ ಭಾರತ-ಚೀನಾ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ ಬಳಿಕ ಉಭಯ ದೇಶಗಳ ನಡುವೆ ಅನೇಕ ಸಲ ದ್ವಿಪಕ್ಷೀಯ ಹಾಗೂ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಲಡಾಖ್ನ ಲೇಹ್ಗೆ ಭೇಟಿ ನೀಡಿ ಯೋಧರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಳಿಸುವ ಪ್ರಯತ್ನ ಬೇಡ: ಮೋದಿ ಲಡಾಖ್ ಭೇಟಿಗೆ ಚೀನಾ ಅಪಸ್ವರ - ಜೋ ಲಿಜಿಯಾನ್
ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಪುಂಡಾಟ ಮೆರೆದಿದ್ದ ಚೀನಾಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ತಿರುಗೇಟು ನೀಡಿದ್ದಾರೆ. ಇದಕ್ಕೆ ಚೀನಾ ಪ್ರತಿಕ್ರಿಯೆ ನೀಡಿದೆ.
![ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಳಿಸುವ ಪ್ರಯತ್ನ ಬೇಡ: ಮೋದಿ ಲಡಾಖ್ ಭೇಟಿಗೆ ಚೀನಾ ಅಪಸ್ವರ China](https://etvbharatimages.akamaized.net/etvbharat/prod-images/768-512-7873882-96-7873882-1593764552173.jpg)
ಮೋದಿ ಲಡಾಖ್ಗೆ ಭೇಟಿ ನೀಡುತ್ತಿದ್ದಂತೆ ಚೀನಾ ಎಚ್ಚೆತ್ತುಕೊಂಡಿದೆ. ಗಡಿ ಉದ್ವಿಗ್ನತೆ ಪ್ರಯತ್ನದಲ್ಲಿ ಯಾವುದೇ ಸೇನೆ ಭಾಗಿಯಾಗಬಾರದು. ಉಭಯ ದೇಶಗಳ ನಡುವೆ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಈ ವೇಳೆ ಯಾರೂ ಕೂಡ ಪರಿಸ್ಥಿತಿ ಉಲ್ಬಣಗೊಳಿಸುವ ಕೆಲಸ ಮಾಡಬಾರದು ಎಂದಿದೆ.
ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಈ ಬಗ್ಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಗಡಿ ಉದ್ವಿಗ್ನತೆ ಪ್ರಯತ್ನ ಬೇಡ. ಭಾರತದೊಂದಿಗೆ ಶಾಂತಿಯುತ ಮಾತುಕತೆ ಮುಂದುವರೆದಿದೆ. ಎರಡೂ ಸೇನೆಗಳಿಂದ ಆಕ್ರಮಣಕಾರಿ ವರ್ತನೆ ಸರಿಯಲ್ಲ ಎಂದಿದ್ದು, ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.