ಕರ್ನಾಟಕ

karnataka

ETV Bharat / bharat

ಬಾಲಾಕೋಟ್‌ ದಾಳಿಗೀಗ ವರ್ಷ: ಮಾಜಿ ವಾಯುಸೇನಾ ಮುಖ್ಯಸ್ಥರು ಹೇಳೋದಿಷ್ಟು! - ಬಾಲಕೋಟ್‌ ಭಯೋತ್ಪಾದಕ ಶಿಬಿರದ ಮೇಲಿನ ದಾಳಿ

ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ಇಂಡಿಯನ್​​ ಏರ್​ ಫೋರ್ಸ್​ ನಡೆಸಿದ ದಾಳಿಗೆ ಇಂದಿಗೆ ಒಂದು ವರ್ಷ ವಾಗಿದೆ. ಈ ದಾಳಿಯ ವೇಳೆ 150 ಕಿ.ವೀ ವ್ಯಾಪ್ತಿಯಲ್ಲಿ ಯಾವುದೇ ಪಾಕಿಸ್ತಾನಿ ವಿಮಾನಗಳಿರಲಿಲ್ಲ ಎಂದು ವಾಯುಸೇನಾ ಮಾಜಿ ಮುಖ್ಯಸ್ಥ ಬಿ.ಎಸ್​.ಧನೋವಾ ತಿಳಿಸಿದ್ದಾರೆ.

No Pakistani aircraft
ಮಾಜಿ ವಾಯುಸೇನಾ ಮುಖ್ಯಸ್ಥರು

By

Published : Feb 26, 2020, 6:57 PM IST

Updated : Feb 26, 2020, 7:05 PM IST

ನವದೆಹಲಿ:ಕಳೆದ ವರ್ಷ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ಇಂಡಿಯನ್​​ ಏರ್​ ಫೋರ್ಸ್​ ವಾಯುದಾಳಿ ನಡೆಸಿತ್ತು. ಈ ವೇಳೆ, 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಪಾಕಿಸ್ತಾನಿ ವಿಮಾನಗಳಿರಲಿಲ್ಲ ಎಂದು ವಾಯುಸೇನಾ ಮಾಜಿ ಮುಖ್ಯಸ್ಥ ಬಿ.ಎಸ್​.ಧನೋವಾ ತಿಳಿಸಿದ್ದಾರೆ.

ಭಾರತದ ವಾಯುದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ನಿಖರವಾಗಿ ಒಂದು ವರ್ಷದ ಹಿಂದೆ ಭಾರತವು ಬಾಲಾಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ವಾಯುದಾಳಿ ನಡೆಸಿದೆ."ಸರ್ಕಾರಕ್ಕೆ ನೀಡಲಾದ ತಾಂತ್ರಿಕ ಮಾಹಿತಿಯ ಪ್ರಕಾರ ನಮ್ಮ ದಾಳಿಯೂ ಯಶಸ್ವಿಯಾಗಿದೆ ಎಂದು ಧನೋವಾ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ವಾಯುಸೇನಾ ಮಾಜಿ ಮುಖ್ಯಸ್ಥರು

ಈ ದಾಳಿಗೆ ಸಂಬಂಧಿಸಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾವು ಸ್ಟ್ಯಾಂಡ್​ ಆಫ್​ ಶಸ್ತ್ರಾಸ್ತ್ರಗಳನ್ನು ಬಳಸಿದ್ದೆವು. ಈ ದಾಳಿಯ ಬಗ್ಗೆ ಪಾಕಿಸ್ತಾನದವರಿಗೆ ಯಾವುದೇ ಅರಿವು ಇರಲಿಲ್ಲ. ನಾವು ಯಾವ ರೀತಿಯ ವಾರ್​ಹೆಡ್ಸ್​​ ಬಳಸಿದ್ವಿ ಎಂಬುದು ಅವರಿಗೆ ತಿಳಿದಿಲ್ಲ. ದಾಳಿಗೆ ನಾವು ಯಾವ ರೀತಿ ಸಿದ್ಧರಾಗಿದ್ವಿ, ಅದು ಹೇಗೆ ಸ್ಫೋಟಗೊಳ್ಳುತ್ತದೆ ಎಂಬ ಯಾವ ಜ್ಞಾನ ಅವರಿಗೆ ಇರಲಿಲ್ಲ ಎಂದರು.

ದಾಳಿ ಕುರಿತು ಅವರ ಮೊದಲ ಚಿತ್ರಗಳು ಹೊರಬಂದಾಗ ನಾವು ಹೇಗೆ ದಾಳಿ ಮಾಡಿದ್ದೀವಿ ಎಂಬುದು ಅವರಿಗೆ ತಿಳಿದಿಲ್ಲ ಎಂದು ಅರಿವಾಯಿತು. ಬಾಲಕೋಟ್ ಭಯೋತ್ಪಾದಕ ಶಿಬಿರದ ಮೂರು ಅಂತಸ್ತಿನ ಕಟ್ಟಡದ ಮೇಲೆ ದಾಳಿಯಾಗಿದೆ. ಒಳಗೆ ಜನರು ಸಾವನ್ನಪ್ಪಿರಬೇಕು ಎಂದು ಧನೋವಾ ಒತ್ತಿ ಹೇಳಿದರು.

ಪ್ರತಿ ಕಟ್ಟಡದಲ್ಲಿ ಸರಿಸುಮಾರು ಎಷ್ಟು ಜನರು ಇದ್ದಾರೆಂದು ನಮಗೆ ತಿಳಿದಿತ್ತು. ಹಾಗಾಗಿ ಕಟ್ಟಡಗಳಿಗೆ ಗುರಿ ಇಟ್ಟೇವು ಎಂದರು. ಜಮ್ಮು- ಕಾಶ್ಮೀರದೊಳಗೆ ಬರುವ ಮೊದಲು ಇಲ್ಲಿರುವ ಕಟ್ಟಡಗಳಲ್ಲೇ ತರಬೇತಿಯನ್ನು ಪಡೆಯುತ್ತಿದ್ದರು. ಹಾಗಾಗಿ ಮೂರು ಕಟ್ಟಡಗಳನ್ನು ಗುರಿಯಾಗಿಸಿ, ಆ ಮೂರು ಕಟ್ಟಡಗಳನ್ನು ನೆಲಸಮ ಗೊಳಿಸಿದೆವು ಎಂದರು.

ಈ ದಾಳಿಯಿಂದ ಸಂಭವಿಸಿದ ಸಾವು- ನೋವುಗಳ ಕುರಿತು ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದರು.

Last Updated : Feb 26, 2020, 7:05 PM IST

ABOUT THE AUTHOR

...view details