ಕರ್ನಾಟಕ

karnataka

ಕೊರೊನಾ ಹರಡುವ ಭೀತಿ: ರಾಷ್ಟ್ರಪತಿ ಭವನದಲ್ಲಿ ಈ ಬಾರಿ ಹೋಳಿ ಕೂಟವಿಲ್ಲ

By

Published : Mar 4, 2020, 8:34 PM IST

ಕೊರೊನಾ ಹರಡುವ ಭೀತಿಯಿಂದಾಗಿ ಈ ಬಾರಿ ರಾಷ್ಟಪತಿ ಭವನದಲ್ಲಿ ವರ್ಷಂಪ್ರತಿ ನಡೆಯಲಿರುವ ಸಾಂಪ್ರದಾಯಿಕ ಹೋಳಿ ಕೂಟ ಇರುವುದಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

president ramnath kovind
ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ:ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್​ನಿಂದಾಗಿ ಜನರು ಭಯಭೀತರಾಗಿದ್ದು, ಇತ್ತ ಭಾರತಕ್ಕೂ ಕೊವಿಡ್-19 ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆ ಕೊರೊನಾ ಹರಡುವ ಭೀತಿಯಿಂದಾಗಿ ಈ ಬಾರಿ ರಾಷ್ಟಪತಿ ಭವನದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಹೋಳಿ ಕೂಟ ಇರುವುದಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಕೊರೊನಾ ವೈರಸ್ ಹರಡದಂತೆ ನಾವು ಮುಂಜಾಗ್ರತೆ ವಹಿಸಬೇಕು. ಈ ಹಿನ್ನೆಲೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಹೋಳಿ ಕೂಟ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details