ಕರ್ನಾಟಕ

karnataka

By

Published : Feb 28, 2020, 4:23 PM IST

ETV Bharat / bharat

ನಿರ್ಭಯಾ ಪ್ರಕರಣ: ಮರಣ ದಂಡನೆ ಜೀವಾವಧಿಯಾಗಿ ಪರಿವರ್ತಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ, ಪ್ರತಿ ಬಾರಿ ಅಪರಾಧಿಗಳು ಶಿಕ್ಷೆ ವಿಳಂಬವಾಗಲು ತಂತ್ರಗಳನ್ನು ಬಳಸುತ್ತಾ ಬಂದಿದ್ದು, ಇದೀಗ ಓರ್ವ ಅಪರಾಧಿ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ.

Nirhaya gang rape case
ನಿರ್ಭಯಾ ಪ್ರಕರಣ

ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್​ ಕುಮಾರ್​ ಗುಪ್ತಾ ಇದೀಗ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಕ್ಯುರೇಟಿವ್​ ಅರ್ಜಿ ಸಲ್ಲಿಸಿದ್ದಾನೆ.

2012 ರ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಮಾರ್ಚ್ 3ಕ್ಕೆ ಗಲ್ಲು ಶಿಕ್ಷೆ ಖಚಿತವಾಗಿತ್ತು. ಆದರೆ, ಇದರ ಬೆನ್ನಲ್ಲೇ ಓರ್ವ ಅಪರಾಧಿ ವಿನಯ್​​ ತಲೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದ. ಹಾಗೆಯೇ ನಾಲ್ವರು ಅಪರಾಧಿಗಳಿಗೆ ಒಂದೇ ಬಾರಿ ಗಲ್ಲಿಗೇರಿಸುವ ಬದಲು ಪ್ರತ್ಯೇಕವಾಗಿ ಗಲ್ಲು ಶಿಕ್ಷೆ ವಿಧಿಸುವಂತೆ ಗೃಹ ಸಚಿವಾಲಯ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಮಾರ್ಚ್​​ 5ಕ್ಕೆ ಮುಂದೂಡಿಕೆಯಾಗಿತ್ತು.

ಪ್ರತಿ ಬಾರಿ ಅಪರಾಧಿಗಳು ಶಿಕ್ಷೆ ವಿಳಂಬವಾಗಲು ತಂತ್ರಗಳನ್ನು ಬಳಸುತ್ತ ಬಂದಿದ್ದು, ಇದೀಗ ಪವನ್​ ಕುಮಾರ್ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ.

ABOUT THE AUTHOR

...view details