ಕರ್ನಾಟಕ

karnataka

ETV Bharat / bharat

ನಿರ್ಭಯಾ ಅತ್ಯಾಚಾರಿಗಳ ಕ್ಯುರೇಟಿವ್​ ಅರ್ಜಿ ವಿಚಾರಣೆ ಇಂದು - Nirbhaya rapist curation application hearing today

ಸರ್ವೋಚ್ಛ ನ್ಯಾಯಾಲಯ ಇಂದು ನಿರ್ಭಯಾ ಪ್ರಕರಣ ಅಪಾರಾಧಿಗಳಾದ ವಿನಯ್​ ಶರ್ಮಾ ಹಾಗೂ ಮುಖೇಶ್​ ಅವರು ಮರಣದಂಡನೆ ಆದೇಶವನ್ನ ಪುನರ್​ ಪರಿಶೀಲಿಸುವಂತೆ ಹಾಗೂ ಗಲ್ಲು ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

SC
ಸುಪ್ರೀಂ ಕೋರ್ಟ್​

By

Published : Jan 14, 2020, 11:28 AM IST

ನವದೆಹಲಿ:ಸರ್ವೋಚ್ಛ ನ್ಯಾಯಾಲಯ ಇಂದು ನಿರ್ಭಯಾ ಪ್ರಕರಣ ಅಪಾರಾಧಿಗಳಾದ ವಿನಯ್​ ಶರ್ಮಾ ಹಾಗೂ ಮುಖೇಶ್​ ಅವರು ಮರಣದಂಡನೆ ಆದೇಶವನ್ನ ಪುನರ್​ ಪರಿಶೀಲಿಸುವಂತೆ ಹಾಗೂ ಗಲ್ಲು ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಜಸ್ಟೀಸ್​ ಎನ್​ ವಿ ರಮಣ್​, ಅರುಣ್​ ಮಿಶ್ರಾ, ಆರ್​ ಎಫ್​ ನಾರಿಮನ್​, ಆರ್ ಭಾನುಮತಿ ಹಾಗೂ ಅಶೋಕ್​ ಭೂಷಣ್​ ಅವರನ್ನೊಳಗೊಂಡ ಪಂಚ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ನವದೆಹಲಿ ಪಾಟಿಯಾಲ್​ ಕೋರ್ಟ್ ಕಳೆದ ವಾರ ನಿರ್ಭಯಾ ಕೇಸ್​ನ ಅಪರಾಧಿಗಳಾದ ನಾಲ್ವರಿಗೆ ಡೆತ್​ ವಾರಂಟ್​ ಹೊರಡಿಸಿತ್ತಲ್ಲದೇ ಇದೆ ಜನವರಿ 22 ರಂದು ಗಲ್ಲು ವಿಧಿಸಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ವಿನಯ್​ ಶರ್ಮಾ, ಮುಖೇಶ್​ ಕುಮಾರ್​ ಅಂತಿಮ ನ್ಯಾಯದಾನ( ಇಲ್ಲವೇ ಪರಿಹಾರಾತ್ಮಕ) ಅರ್ಜಿ ಸಲ್ಲಿಸಿ ಗಲ್ಲು ಶಿಕ್ಷೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದರು.

ABOUT THE AUTHOR

...view details