ಕರ್ನಾಟಕ

karnataka

By

Published : Mar 19, 2020, 10:56 PM IST

Updated : Mar 19, 2020, 11:22 PM IST

ETV Bharat / bharat

ನಿರ್ಭಯಾ ಪ್ರಕರಣ: ಅಪರಾಧಿಗಳ ಅರ್ಜಿ ವಜಾ ಮಾಡಿದ ಹೈಕೋರ್ಟ್​; ಗಲ್ಲು ಪಕ್ಕಾ

ನಿರ್ಭಯಾ ಪ್ರಕರಣ
ನಿರ್ಭಯಾ ಪ್ರಕರಣ

22:50 March 19

ನಿರ್ಭಯಾ ಅಪರಾಧಿ ಪರ ವಕೀಲರಿಗೆ ದೆಹಲಿ ಹೈಕೋರ್ಟ್ ತರಾಟೆ!

ನವದೆಹಲಿ:ನವದೆಹಲಿ: ದೆಹಲಿ ಹೈಕೋರ್ಟ್​ನಲ್ಲಿ ನಿರ್ಭಯಾ ಪ್ರಕರಣ ಸಂಬಂಧ ವಿಚಾರಣೆ ನಡೆಸಿ, ಅಪರಾಧಿಗಳ ಪರ ಅರ್ಜಿಯನ್ನ ವಜಾ ಮಾಡಿದೆ.  ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್​ ಅಪರಾಧಿಗಳ ಪರ ವಕೀಲರಿಗಿ ಛೀಮಾರಿ ಹಾಕಿದೆ.

ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಅವರ ಪತ್ನಿಯ ವಿಚ್ಛೇದನ ವಿಚಾರವಾಗಿ ವಕೀಲರು ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಕೋರ್ಟ್​, ವಿಚ್ಛೇದನ ಅರ್ಜಿಗೂ ಈ ಮರಣದಂಡನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಅಪರಾಧಿಗಳ ಮರಣದಂಡನೆ ಕುರಿತು ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಂದು ಸಂಜೆ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿಗದಿತ ಮರಣದಂಡನೆಗೆ ಒಂದು ದಿನ ಮೊದಲು ಪವನ್ ಗುಪ್ತಾ, ಮುಖೇಶ್ ಸಿಂಗ್ ಮತ್ತು ಅಕ್ಷಯ್ ಸಿಂಗ್ ಅವರು ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಒಂದರ ನಂತರ ಒಂದರಂತೆ ಕೋರ್ಟ್​ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಮನ್​ಮೋಹನ್ ಮತ್ತು ಸಂಜೀವ್ ನರುಲಾ ಅವರನ್ನೊಳಗೊಂಡ ನ್ಯಾಯಪೀಠವು, ವಿಚ್ಛೇದನ ಅರ್ಜಿಯು ಬಾಕಿ ಉಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಅಭಿಪ್ರಾಯಪಟ್ಟಿದೆ ಎಂದು ಹೇಳಿದೆ. ಮರಣದಂಡನೆಯನ್ನು ದೃಢೀಕರಿಸುವ ಸುಪ್ರೀಂ ಕೋರ್ಟ್ ತೀರ್ಪು ಅಂತಿಮವಾಗಿದೆ. ಹೀಗಾಗಿ ನ್ಯಾಯಾಲಯವು ಅದರ ಬಗ್ಗೆ  ಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Last Updated : Mar 19, 2020, 11:22 PM IST

ABOUT THE AUTHOR

...view details