ಕರ್ನಾಟಕ

karnataka

By

Published : Mar 13, 2020, 6:05 PM IST

ETV Bharat / bharat

ಕ್ಷಮಾದಾನ ಅರ್ಜಿ ತಿರಸ್ಕೃತ: ನಿರ್ಭಯಾ ಅಪರಾಧಿಯಿಂದ ಮತ್ತೊಂದು ಅರ್ಜಿ

ಈ ಹಿಂದೆ ತಾನು​ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ತಿರಸ್ಕರಿಸಿರುವುದರ ಹಿಂದೆ ಕಾನೂನು ಹಾಗೂ ಸಾಂವಿಧಾನಿಕ ಪ್ರಕ್ರಿಯೆಯ ವೈಫಲ್ಯತೆಯಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್​ಗೆ ಮತ್ತೆ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್​ ಶರ್ಮಾ​ ಅರ್ಜಿ ಸಲ್ಲಿಸಿದ್ದಾನೆ.

Nirbhaya case convict Vinay
ವಿನಯ್​ ಶರ್ಮಾ

ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್​ ಶರ್ಮಾ ಗಲ್ಲು ಶಿಕ್ಷೆಯನ್ನು ವಿಳಂಬವಾಗಿಸಲು ಮತ್ತೊಂದು ಉಪಾಯ ಹುಡುಕಿಕೊಂಡಿದ್ದಾನೆ.

ಈ ಹಿಂದೆ ತಾನು​ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ತಿರಸ್ಕರಿಸಿರುವುದರ ಹಿಂದೆ ಕಾನೂನು ಹಾಗೂ ಸಾಂವಿಧಾನಿಕ ಪ್ರಕ್ರಿಯೆಯ ವೈಫಲ್ಯತೆಯಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್​ಗೆ ಮತ್ತೆ ವಿನಯ್​ ಅರ್ಜಿ ಸಲ್ಲಿಸಿದ್ದಾನೆ.

ಅಪರಾಧಿಗಳ ಪರ ವಕೀಲ ಎ ಪಿ ಸಿಂಗ್​ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ಕ್ಷಮಾದಾನ ಅರ್ಜಿ ತಿರಸ್ಕರಿಸಲು ರಾಷ್ಟ್ರಪತಿಗೆ ಕಳುಹಿಸಿದ ಶಿಫಾರಸಿನಲ್ಲಿ ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಸಹಿಯೇ ಇಲ್ಲವೆಂದು ಉಲ್ಲೇಖಿಸಲಾಗಿದೆ.

ಈಗಾಗಲೇ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್, ಪವನ್, ವಿನಯ್ ಮತ್ತು ಅಕ್ಷಯ್​​ರನ್ನು ಮಾರ್ಚ್ 20 ರಂದು ಗಲ್ಲಿಗೇರಿಸುವಂತೆ ನ್ಯಾಯಾಲಯ ಹೊಸದಾಗಿ ಡೆತ್ ವಾರೆಂಟ್​ ನೀಡಿದೆ.

ABOUT THE AUTHOR

...view details