ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆಯ ಐದು ಸದಸ್ಯರ ತಂಡವು ಅಮಾನತುಗೊಂಡ ಜಮ್ಮುಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಿಚಾರಣೆ ನಡೆಸಲಿದೆ.
ಈ ತಂಡ ಸಾಕ್ಷ್ಯ ಸಂಗ್ರಹಿಸಲು ಒಂದು ವಾರಗಳ ಕಾಲ ಕಾಶ್ಮೀರದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ತಂಡ ಹಿಂದಿರುಗುವಾಗ ಸಿಂಗ್ ಅವರನ್ನು ದೆಹಲಿಗೆ ಕರೆದೊಯ್ಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾ ತಂಡವು ಮುಂದಿನ ಕೆಲವು ದಿನಗಳಲ್ಲಿ ಕುಲ್ಗಮ್, ಖಾಜಿಗುಂಡ್, ಶ್ರೀನಗರ ವಿಮಾನ ನಿಲ್ದಾಣ ಮತ್ತು ಸಿಂಗ್ ಅವರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ.