ಕರ್ನಾಟಕ

karnataka

ETV Bharat / bharat

ಭಯೋತ್ಪಾದಕರೊಂದಿಗೆ ಕಾಣಿಸಿಕೊಂಡಿದ್ದ ಡಿಎಸ್ಪಿ ದೇವಿಂದರ್ ಸಿಂಗ್: ಎನ್‌ಐಎಯಿಂದ ಪ್ರಕರಣದ ತನಿಖೆ - ರಾಷ್ಟ್ರೀಯ ತನಿಖಾ ಸಂಸ್ಥೆ

ಅಮಾನತುಗೊಂಡ ಜಮ್ಮುಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಅವರನ್ನು ಹೆಚ್ಚಿನ ತನಿಖೆಗೊಳಪಡಿಸಲು ಗೃಹ ಸಚಿವಾಲಯ ಎನ್‌ಐಎಗೆ ಆದೇಶಿಸಿದೆ.

ಜಮ್ಮು ಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರ ದೇವಿಂದರ್ ಸಿಂಗ್ ,  NIA to question arrested DSP Davinder Singh in Srinagar today
ಜಮ್ಮು ಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರ ದೇವಿಂದರ್ ಸಿಂಗ್

By

Published : Jan 19, 2020, 7:10 PM IST

ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆಯ ಐದು ಸದಸ್ಯರ ತಂಡವು ಅಮಾನತುಗೊಂಡ ಜಮ್ಮುಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಿಚಾರಣೆ ನಡೆಸಲಿದೆ.

ಈ ತಂಡ ಸಾಕ್ಷ್ಯ ಸಂಗ್ರಹಿಸಲು ಒಂದು ವಾರಗಳ ಕಾಲ ಕಾಶ್ಮೀರದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ತಂಡ ಹಿಂದಿರುಗುವಾಗ ಸಿಂಗ್ ಅವರನ್ನು ದೆಹಲಿಗೆ ಕರೆದೊಯ್ಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾ ತಂಡವು ಮುಂದಿನ ಕೆಲವು ದಿನಗಳಲ್ಲಿ ಕುಲ್ಗಮ್, ಖಾಜಿಗುಂಡ್, ಶ್ರೀನಗರ ವಿಮಾನ ನಿಲ್ದಾಣ ಮತ್ತು ಸಿಂಗ್ ಅವರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ.

ಗೃಹ ಸಚಿವಾಲಯದ ಆದೇಶ ಸ್ವೀಕರಿಸಿದ ನಂತರ ಎನ್‌ಐಎ ನಿನ್ನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಪ್ರಕರಣದ ಹಿನ್ನೆಲೆ:
ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಕಾಜಿಪುರದಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ಸಿಂಗ್ ಅವರನ್ನು ಜನವರಿ 11 ರಂದು ಬಂಧಿಸಲಾಗಿತ್ತು. ಆ ವೇಳೆ ಕಾರಿನಲ್ಲಿ ಕಮಾಂಡರ್ ನವೀದ್ ಬಾಬು ಸೇರಿದಂತೆ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿದ್ದರು.

ABOUT THE AUTHOR

...view details