ನವದೆಹಲಿ: ಚೀನಾ ಎಲ್ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್)ನ ಭಾರತದ ಭಾಗದಲ್ಲಿ ಹೊಸದೊಂದು ಕಾಮಗಾರಿ ನಡೆಸುತ್ತಿದೆ. ಇದು ಉಪಗ್ರಹ ಚಿತ್ರಗಳ ಮೂಲಕ ಗೊತ್ತಾಗುತ್ತಿದೆ. ಇದು ಕೇಂದ್ರ ಸರ್ಕಾರದ ಅರಿವಿಗೆ ಬಂದಿದೆಯೇ ಎಂದು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚೀನಾದ ದುಸ್ಸಾಹಸ ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪ್ಯಾಂಗೋಂಗ್ ಸರೋವರ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ಹೊಸ ಕಾಮಗಾರಿ ಆತಂಕಕ್ಕೀಡು ಮಾಡಿದೆ ಎಂದಿದ್ದಾರೆ.