ಕರ್ನಾಟಕ

karnataka

By

Published : Feb 18, 2020, 11:13 PM IST

ETV Bharat / bharat

ಸಿಎಎಗೆ ಬೆಂಬಲ ಎಂದಿದ್ದ ಉದ್ಧವ್​ ಠಾಕ್ರೆ ಜೊತೆ ಚರ್ಚೆಗೆ ಮುಂದಾದ ಶರದ್​ ಪವಾರ್​

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಆರ್​ಸಿ) ಬೆಂಬಲಿಸುತ್ತೇವೆ ಎಂದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಹೇಳಿದ್ದಾರೆ.

NCP firm in opposing CAA, will try to convince Uddhav Thackeray:  Sharad Pawar
ಶರದ್​ ಪವಾರ್​

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಆರ್​ಸಿ) ಬೆಂಬಲಿಸುತ್ತೇವೆ ಎಂದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡುತ್ತೇನೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಮೈತ್ರಿ ಸರ್ಕಾರ (ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಸೇರಿ) ಸೈದ್ಧಾಂತಿಕ ವ್ಯತ್ಯಾಸಗಳನ್ನು ಹೊಂದಿವೆ. ಉದ್ಧವ್​ ಠಾಕ್ರೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್​ ಮತ್ತು ಎನ್​ಸಿಪಿ ತುಸು ಇರಿಸುಮುರಿಸಿಗೆ ಒಳಗಾದವು.

ಅದರಲ್ಲಿ ಕಾಂಗ್ರೆಸ್​ ಮತ್ತು ಎನ್​ಸಿಪಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಪ್ರಬಲ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಶರದ್​ ಪವಾರ್ ಅವರು, ಸಿಎಂ ಉದ್ದವ್​ ಠಾಕ್ರೆ ಅವರೊಂದಿಗೆ ಚರ್ಚಿಸಿ ಮನವೊಲಿಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಹೇಳಿದ್ದಾರೆ.

ಉದ್ಧವ್‌ ಠಾಕ್ರೆ ಅವರು ಸಿಎಎಯಿಂದ ದೇಶಕ್ಕೆ ತೊಂದರೆಯಿಲ್ಲ. ಸಿಎಎ ಮತ್ತು ಎನ್‌ಪಿಆರ್‌ಗಳ ನಡುವೆ ವ್ಯತ್ಯಾಸಗಳಿವೆ. ರಾಜ್ಯದಲ್ಲಿ ಸಿಎಎ ಜಾರಿಯಾದರೂ ಯಾರೂ ಆತಂಕ ಪಡಬೇಕಿಲ್ಲ ಎಂದು ಹೇಳಿದ್ದರು.

ABOUT THE AUTHOR

...view details