ಕರ್ನಾಟಕ

karnataka

By

Published : Dec 19, 2019, 1:10 PM IST

ETV Bharat / bharat

ಕೈಗಾ ಅಣು ವಿದ್ಯುತ್​​​​ ಸ್ಥಾವರ ವಿಸ್ತರಣೆ ವಿಚಾರ: ಕೇಂದ್ರದ ಪ್ರತಿಕ್ರಿಯೆ ಕೇಳಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ!

ಕೈಗಾ ಅಣು ವಿದ್ಯುತ್​ ಸ್ಥಾವರ ವಿಸ್ತರಣೆ ವಿಚಾರವಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಕೇಂದ್ರ ಸರ್ಕಾರದ ಬಳಿ ಪ್ರತಿಕ್ರಿಯೆ ಕೇಳಿದೆ.

National Green Tribunal
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್‌ ಸ್ಥಾವರ ವಿಸ್ತರಿಸಿ 5 ಮತ್ತು 6ನೇ ಘಟಕಗಳನ್ನು ಕಾಳಿ ಹುಲಿ ಸಂರಕ್ಷಣಾ ಅರಣ್ಯದ ಸನಿಹದಲ್ಲೇ ಸ್ಥಾಪಿಸಲು ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಗ್ರೀನ್​ ಸಿಗ್ನಲ್​ ನೀಡಿದೆ.

1400 ಮೆಗಾವ್ಯಾಟ್​​​​​ ಹೆಚ್ಚುವರಿ ವಿದ್ಯುತ್​​ ಉತ್ಪಾದಿಸಲು ಕೈಗಾ ಅಣು ವಿದ್ಯುತ್​​ ಸ್ಥಾವರ ಘಟಕ ವಿಸ್ತರಣೆಗೆ ಈಗಾಗಲೇ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಈಗಾಗಲೇ ಕೈಗಾ ಅಣು ವಿದ್ಯುತ್​​ ಸ್ಥಾವರದ ವಿಸ್ತರಣೆ ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದಿವೆ. ಇದರಿಂದ ಸುತ್ತಲಿನ ಪ್ರದೇಶದ ಜನರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ದಟ್ಟಾಗಿರುವ ಕಾರಣ ಯಾವುದೇ ಕಾರಣಕ್ಕೂ ಇದರ ವಿಸ್ತರಣೆ ಮಾಡಲು ಬಿಡುವುದಿಲ್ಲ ಎಂದು ಅಲ್ಲಿನ ಜನ ಪಟ್ಟು ಹಿಡಿದಿದ್ದಾರೆ.

ABOUT THE AUTHOR

...view details