ಕರ್ನಾಟಕ

karnataka

ETV Bharat / bharat

ರಾಮ ಮಂದಿರದ ಧ್ವನಿ ಉಡುಗಿತೇ.. ಭಯೋತ್ಪಾದನೆ ನಿಂತೋಯ್ತೇ..- ಪ್ರಧಾನಿ ವಿರುದ್ಧ ಫಾರೂಕ್‌ ಅಬ್ದುಲ್ಲಾ ವಾಗ್ದಾಳಿ - ಫರೂಕ್​ ಅಬ್ದುಲ್ಲಾ

ಬಾಲಾಕೋಟ್​ ದಾಳಿಗೂ ಮುನ್ನ ಇದ್ದ ರಾಮಮಂದಿರದ ಕೂಗು ಈಗಿಲ್ಲ ಎಂದು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಮುಖ್ಯಸ್ಥ ಫರೂಕ್​ ಅಬ್ದುಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಲಕೋಟ್​ ದಾಳಿ ನಂತರ ರಾಮಮಂದಿರದ ಕೂಗು ಎಲ್ಲಿ ಎಂದು ಫರೂಕ್​ ಅಬ್ದುಲ್ಲಾ

By

Published : Mar 26, 2019, 10:09 AM IST

ವಿಜಯವಾಡ : ಈ ಮೊದಲು ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದ ಜನ ಈಗ ಅದರ ಚಕಾರವೆತ್ತುತ್ತಿಲ್ಲ ಎಂದು ನ್ಯಾಷನಲ್​ ಕಾನ್ಫೆರೆನ್ಸ್​ ಪಕ್ಷದ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ಅವರು, ಬಾಲಾಕೋಟ್​ ದಾಳಿಗೂ ಮುನ್ನ ಕೆಲ ಮಂದಿ ರಾಮಮಂದಿರದ ಬಗ್ಗೆಯೇ ಮಾತನಾಡುತ್ತಿದ್ದರು. ಸದಾ ಮಂದಿರ, ಮಂದಿರ, ಮಂದಿರ ಎನ್ನುತ್ತಿದ್ದರು. ಆದರೆ, ಈಗ ಮಂದಿರದ ಬಗ್ಗೆ ಮಾತಿಲ್ಲ ಎಂದು ಬಿಜೆಪಿಗರನ್ನು ಪರೋಕ್ಷವಾಗಿ ಕಟುಕಿದರು.

ರಾಮಮಂದಿರದ ಕೂಗು ಎಲ್ಲಿ ಎಂದು ಪ್ರಶ್ನಿಸಿದ ಫಾರೂಕ್​ ಅಬ್ದುಲ್ಲಾ

ಇಲ್ಲೊಬ್ಬ ವ್ಯಕ್ತಿ (ನರೇಂದ್ರ ಮೋದಿ) ಹನುಮನಂತೆ ಪಾಕ್​ ಅನ್ನು ಬಗ್ಗು ಬಡೆಯುತ್ತಾರೆ ಎಂದು ಬಿಂಬಿಸಿದ್ದಾರೆ. ಆದರೆ, ಅವರು ಪಾಕ್​ ಅನ್ನು ಬಗ್ಗು ಬಡಿದರೇ? ಭಯೋತ್ಪಾದನೆ ನಿಂತುಹೋಯ್ತೇ? ಪಾಕ್​ಗೆ ತಕ್ಕ ಪಾಠ ಕಲಿಸಿದರೇ? ನನಗಂತೂ ಹೀಗೆ ಅನ್ನಿಸುತ್ತಿಲ್ಲ ಎಂದರು.

ಬಾಲಾಕೋಟ್​ ದಾಳಿಯಲ್ಲಿ 300 ಉಗ್ರರು ಸತ್ತಿದ್ದೇ ಆದರೆ ಅಂತಾರಾಷ್ಟ್ರೀಯಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ, ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಅವರು ದೇಶದ್ರೋಹಿಗಳಾಗಿಬಿಡ್ತಾರೆ, ಪಾಕಿಸ್ತಾನಿಗಳಾಗಿ ಬಿಡ್ತಾರೆ ಎಂದು ಛೇಡಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಪ್ರಶ್ನಿಸುವ ಹಕ್ಕಿದೆ. ಆದರೆ, ಈಗ ಪ್ರಶ್ನಿಸುವ ಹಕ್ಕನ್ನೇ ಹತ್ತಿಕ್ಕಲಾಗ್ತಿದೆ. ನಿಜವಾದ ಪ್ರಜಾಪ್ರಭುತ್ವ ನೆಲೆಸಿ, ಗಾಂಧಿ ಕಂಡ ಭಾರತವನ್ನು ಪುನರ್​ಸ್ಥಾಪಿಸಬೇಕು ಎಂದು ಫಾರೂಕ್‌ ಅಬ್ಧುಲ್ಲಾ ಹೇಳಿದರು.

ABOUT THE AUTHOR

...view details