ಕರ್ನಾಟಕ

karnataka

ETV Bharat / bharat

ಮುಂಬೈನಲ್ಲಿ ಬ್ರಿಡ್ಜ್​​ ಕುಸಿತ: ಐವರು ಸಾವು,34 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ರೈಲ್ವೆ ಸ್ಟೇಷನ್​ ಟರ್ಮಿನಲ್​ ಗೇಟ್​​ ನಂಬರ್​ 1ರಲ್ಲಿ ಘಟನೆ ನಡೆದಿದ್ದು, ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.

By

Published : Mar 15, 2019, 12:07 AM IST

ಮುಂಬೈನಲ್ಲಿ ಬ್ರಿಡ್ಜ್​​ ಕುಸಿತ

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್​ ರೈಲ್ವೆ ಸ್ಟೇಷನ್​​ ಟರ್ಮಿನಲ್​​ನ ಪ್ಲಾಟ್​ಫಾರ್ಮ್​ 1ರಲ್ಲಿನ ಬಿಡ್ಜ್​ವೊಂದರ ದಿಢೀರ್​ ಕುಸಿತದಿಂದ ಐವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮುಂಬೈನಲ್ಲಿ ಬ್ರಿಡ್ಜ್​​ ಕುಸಿತ

ಇಂದು ಸಂಜೆ ಈ ಬ್ರಿಡ್ಜ್​ ಕುಸಿದ ಕಾರಣ ಹಲವರು ಅದರಡಿ ಸಿಲುಕಿಕೊಂಡಿದ್ದರು. ಘಟನೆಯಲ್ಲಿ 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಮುಂಬೈನ ಆರ್​ಆರ್​ಸಿಯ ಒಂದು ತಂಡ ಹಾಗೂ ಅಗ್ನಿಶಾಮಕ ದಳದವರು ಘಟನೆಯ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಸಾವನ್ನಪ್ಪಿದವರನ್ನು ಜಾಹಿದ್ ಶಿರಾಜ್ ಖಾನ್(32), ಅಪೂರ್ವ ಪ್ರಭು(35)ಮತ್ತು ರಂಜನಾ ತಾಂಬೆ(40) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿರುವವರೆಗೆ ಸಿಎಂ ಪಡ್ನವೀಸ್​ 5ಲಕ್ಷ ರೂ ಪರಿಹಾರ ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತ ಘಟನೆಗೆ ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್​ ಸಿಂಗ್​ ತೀವ್ರ ಸಂತಾಸ ಸೂಚಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಅನೇಕರ ಸ್ಥಿತಿ ಗಂಭೀರವಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details