ಕರ್ನಾಟಕ

karnataka

ETV Bharat / bharat

ಕೊರೊನಾದಿಂದಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕಮಲ್​ನಾಥ್​ ಸರ್ಕಾರ - ಮಧ್ಯಪ್ರದೇಶ ವಿಧಾನಸಭೆ ಅಧಿವೇಶನ ಮುಂದೂಡಿಕೆ

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಮಲ್​ ನಾಥ್​ ವಿಶ್ವಾಸ ಮತಯಾಚನೆ ನಡೆಸುತ್ತಾರೆ ಎಂದೇ ಎಲ್ಲರು ತಿಳಿದಿದ್ದರು. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಸದನವನ್ನು ಮಾರ್ಚ್ 26ರ ವರೆಗೆ ಮುಂದೂಡಲಾಗಿದೆ.

MP House adjourned till March 26,ಕೊರೊನಾ ಭೀತಿಯಿಂದ ಸದನ ಮೂಂದೂಡಿಕೆ
ಕೊರೊನಾ ಭೀತಿಯಿಂದ ಸದನ ಮೂಂದೂಡಿಕೆ

By

Published : Mar 16, 2020, 12:32 PM IST

Updated : Mar 16, 2020, 6:57 PM IST

ಭೋಪಾಲ್: ಬಿಜೆಪಿ ಶಾಸಕರ ವಿಶ್ವಾಸ ಮತಯಾಚನೆ ಒತ್ತಾಯದ ನಡುವೆಯೂ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನವನ್ನು ಮಾರ್ಚ್ 26ರ ವರೆಗೆ ಮುಂದೂಡಲಾಗಿದೆ.

ರಾಜ್ಯಪಾಲ ಲಾಲ್​ಜಿ ಟಂಡನ್ ಅವರ ಸಂಕ್ಷಿಪ್ತ ಭಾಷಣದ ನಂತರ, ಬಿಜೆಪಿಯ ಶಾಸಕರು ವಿಶ್ವಾಸ ಮತಯಾಚನೆ ಬೇಡಿಕೆಯನ್ನು ಎತ್ತಿದರು. ಇದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.

ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಗೋವಿಂದ್ ಸಿಂಗ್ ಅವರು ದೇಶದಲ್ಲಿ ಹರಡಿರುವ ಕೊರೊನಾ ವೈರಸ್ ಭೀತಿಯನ್ನು ಪ್ರಸ್ತಾಪಿಸಿ ಕೇಂದ್ರದ ಸಲಹೆಯನ್ನು ಸದನಕ್ಕೆ ತಿಳಿಸಿದರು. ಗೋವಿಂದ್ ಸಿಂಗ್ ಅವರ ಮನವಿಗೆ ಸಮ್ಮತಿಸಿದ ಸ್ಪೀಕರ್ ಸದನವನ್ನು ಮಾರ್ಚ್ 26ರ ವರೆಗೆ ಮುಂದೂಡಿದರು.

Last Updated : Mar 16, 2020, 6:57 PM IST

ABOUT THE AUTHOR

...view details