ಕರ್ನಾಟಕ

karnataka

‘ನನ್ನೊಂದಿಗೆ ಆ ಮಕ್ಕಳು ಭಾರವಾಗೋದು ಬೇಡ’...ತಾಯಿಯ ಆವೇಶಕ್ಕೆ ಬಲಿಯಾದ ಕಂದಮ್ಮಗಳು!

ನನ್ನೊಂದಿಗೆ ನನ್ನ ಮಕ್ಕಳು ಪ್ರಪಂಚಕ್ಕೆ ಭಾರವಾಗುವುದು ಬೇಡ ಎಂದು ಆ ತಾಯಿಯ ನಿರ್ಧಾರವಾಗಿತ್ತು. ಆ ತಾಯಿಯ ತಪ್ಪು ನಿರ್ಧಾರಕ್ಕೆ ಮತ್ತು ತನ್ನ ಕ್ಷಣಿಕ ಆವೇಶಕ್ಕೆ ಎರಡು ಮಕ್ಕಳು ಬಲಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

By

Published : Oct 29, 2019, 9:39 AM IST

Published : Oct 29, 2019, 9:39 AM IST

ತಾಯಿಯ ಆವೇಶಕ್ಕೆ ಬಲಿಯಾದ ಕಂದಮ್ಮಗಳು

ಜನಗಾಮ ( ತಲಂಗಾಣ) :ಗಂಡ-ಹೆಂಡ್ತಿ ಜಗಳಕ್ಕೆ ಇಬ್ಬರು ಮುದ್ದಾದ ಮಕ್ಕಳು ಬಲಿಯಾಗಿರುವ ಘಟನೆ ಜನಗಾಮ ಜಿಲ್ಲೆಯ ಶಿವಭಿಕ್ಯ ತಾಂಡಾದಲ್ಲಿ ನಡೆದಿದೆ.

ಇಲ್ಲಿನ ಬಾನೋತು ಗೋಪಾಲ್​, ರಮ ದಂಪತಿಗೆ ಭಾನುಶ್ರೀ (4) ಮತ್ತು ವರುಣ್​ (3) ಮಕ್ಕಳಿದ್ದರು. ರಮಾ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪದೇ ಪದೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಖರ್ಚು-ವೆಚ್ಚ ಜಾಸ್ತಿಯಾಗುತ್ತಿರುವುದರಿಂದ ಗಂಡ - ಹೆಂಡ್ತಿ ಮಧ್ಯೆ ಘರ್ಷಣೆ ನಡೆಯುತ್ತಿತ್ತು.

ಆತ್ಮಹತ್ಯೆಗೆ ಯತ್ನಿಸಿದ ತಾಯಿ ರಮ

ಸೋಮವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಕೆಲಸ ನಿಮಿತ್ತ ಗೋಪಾಲ್​ ಮನೆಯಿಂದ ಹೊರ ಹೋಗಿದ್ದ. ಸಂಜೆ 5:30ರ ವೇಳೆ ರಮಾ ಕತ್ತಿಯಿಂದ ತನ್ನ ಎರಡು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಬಳಿಕ ಅದೇ ಕತ್ತಿಯಿಂದ ತನ್ನ ತಲೆಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆ ಮನೆಯ ಅಕ್ಕ- ಪಕ್ಕದವರ ಗಮನಕ್ಕೆ ಬಂದಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರಮಾಳನ್ನು ಜನಗಾಮ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಸ್ಥಿತಿ ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವರಂಗಲ್​ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ನರ್ಮೆಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details