ಕರ್ನಾಟಕ

karnataka

ETV Bharat / bharat

ಇದೆಂಥಾ ಮನಸ್ಥಿತಿ? ಮುಂಗುಸಿಗಳನ್ನು ಕೊಂದು ಮರಕ್ಕೆ ನೇಣು ಹಾಕಿ ವಿಕೃತಿ! - Cruelty to animals in Kerala

ಕೆಲ ದಿನಗಳ ಹಿಂದಷ್ಟೇ ಕೇರಳದ ತಿರುವನಂತಪುರಂನಲ್ಲಿ ಗರ್ಭಿಣಿ ಬೆಕ್ಕನ್ನು ಕೊಂದು ಮರಕ್ಕೆ ನೇಣು ಹಾಕಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಬೆನ್ನಲ್ಲೇ ಇದೀಗ ಎರಡು ಮುಂಗುಸಿಗಳನ್ನು ಕೊಂದಿರುವ ಪಾಪಿಗಳು ಅದನ್ನೂ ಮರಕ್ಕೆ ನೇಣು ಹಾಕಿದ್ದಾರೆ.

ಮುಂಗುಸಿಗಳನ್ನು ಕೊಂದು ಮರಕ್ಕೆ ನೇಣು ಹಾಕಿದ ಪಾಪಿಗಳು

By

Published : Nov 17, 2019, 3:28 PM IST

ಕಾಸರಗೋಡು(ಕೇರಳ):ಎರಡು ಮುಂಗುಸಿಗಳನ್ನು ಕೊಂದ ಕಿಡಿಗೇಡಿಗಳು, ಅದನ್ನು ಮರಕ್ಕೆ ನೇತು ಹಾಕಿರುವ ವಿಲಕ್ಷಣ ಘಟನೆ ಜಿಲ್ಲೆಯ ಕುಂಬದಾಜೆ ಎಂಬಲ್ಲಿ ನಡೆದಿದೆ.

ಇಲ್ಲಿನ ಖಾಸಗಿ ವ್ಯಕ್ತಿಗೆ ಸೇರಿದ ಸ್ಥಳವೊಂದರಲ್ಲಿ ಈ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ತಿರುವನಂತಪುರಂನಲ್ಲಿ ಗರ್ಭಿಣಿ ಬೆಕ್ಕನ್ನು ಕೊಂದು ಇದೇ ರೀತಿ ನೇಣಿಗೆ ಹಾಕಲಾಗಿತ್ತು. ಇದಾದ ಬೆನ್ನಲ್ಲೇ ಮುಂಗುಸಿಗಳನ್ನು ಕೊಂದು ನೇಣು ಹಾಕಿರುವ ಘಟನೆ ಮಾನವನ ಹಿಂಸಾತ್ಮಕ ಮನೋಭಾವದ ಪರಿಯನ್ನು ತೋರಿಸುತ್ತಿದೆ.

ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮುಂಗುಸಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

For All Latest Updates

ABOUT THE AUTHOR

...view details