ಕರ್ನಾಟಕ

karnataka

By

Published : Sep 23, 2019, 3:10 AM IST

ETV Bharat / bharat

ಸೋಮವಾರದ ಭವಿಷ್ಯ: ಈ ರಾಶಿಯವರು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ

ಸೋಮವಾರದ ದಿನ ಭವಿಷ್ಯ ಹೀಗಿದೆ ನೋಡಿ..

ಸೋಮವಾರದ ಭವಿಷ್ಯ

ಮೇಷ : ನೀವು ಕಲ್ಪನಾಶಕ್ತಿ ಮತ್ತು ಉದ್ಯಮಶೀಲ ವ್ಯಕ್ತಿ, ಮತ್ತು ಇಂದು ನೀವು ಯಶಸ್ಸಿನ ರುಚಿ ಕಾಣುತ್ತೀರಿ. ನೀವು ಮಹತ್ವಾಕಾಂಕ್ಷೆ ಹೊಂದಿರುತ್ತೀರಿ ಆದರೆ ನೀವು ನಿರ್ವಹಿಸುವುದಕ್ಕಿಂತ ಹೆಚ್ಚು ಕೆಲಸ ತೆಗೆದುಕೊಳ್ಳದೇ ಇರುವುದು ಸೂಕ್ತ. ನಿಮ್ಮ ಸಾಮರ್ಥ್ಯಗಳ ಕುರಿತು ನೀವು ಸಕಾರಾತ್ಮಕವಾಗಿರುತ್ತೀರಿ, ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿರಿ ಮತ್ತು ದೇವರಲ್ಲಿ ವಿಶ್ವಾಸವಿರಿಸಿ.

ವೃಷಭ :ನಿಮ್ಮ ಒತ್ತಡದ ಜೀವನದಿಂದ ಬಿಡುವು ಪಡೆದು ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿಪಾತ್ರರನ್ನು ಆಹ್ವಾನಿಸಿ ಅವರೊಂದಿಗೆ ಮಹತ್ತರ ಕಾಲ ಕಳೆಯಿರಿ. ಈ ದಿನ ಸಾಕಷ್ಟು ಮಸಾಲೆಯುಕ್ತ ತಿನಿಸು ತಿನ್ನುವುದು ನಿಮ್ಮ ಉದ್ದೇಶವಾಗಿರುತ್ತದೆ.

ಮಿಥುನ:ಯಾವುದೋ ಒಂದು ಕಾರಣಕ್ಕೆ ನಿಮ್ಮ ಮನಸ್ಸು ವಿಚಲಿತ ಮತ್ತು ಆತಂಕದಿಂದ ಕೂಡಿರುತ್ತದೆ. ನಿಮ್ಮ ಆತಂಕಗಳನ್ನು ವ್ಯಕ್ತಪಡಿಸಲು ನೀವು ಅಶಕ್ತರಾಗುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಶಕ್ತರಾಗುತ್ತೀರಿ. ಹಿಂದಿನದು ಹೋಗಲಿ ಎಂದು ಬಿಟ್ಟು ವಿಶ್ವಾಸದಿಂದ ಮುಂದುವರೆಯಲು ಪ್ರಯತ್ನಿಸಿ.

ಕರ್ಕಾಟಕ : ನಿಮಗೆ ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯ ಸಾಧ್ಯತೆ ಇದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಂತ ಮತ್ತು ಸಮಚಿತ್ತತೆಯಿಂದ ಇರಿ. ಹಾಗೆ ಮಾಡಿದಲ್ಲಿ ನೀವು ಸದಾ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ನೀವು ಕೋಪಗೊಳ್ಳುತ್ತಿದ್ದರೆ ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟ.

ಸಿಂಹ :ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ಅಪಾರ ರಿಸ್ಕ್ ಗಳನ್ನು ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ. ನಿಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಇಡೀ ಶಕ್ತಿ ಬಳಸಿ ಸಫಲರಾಗುತ್ತೀರಿ. ಇದು ನಿಮಗೆ ಒಳ್ಳೆಯ ದಿನವಾಗಿದೆ, ವದಂತಿಗಳನ್ನು ನಿಯಂತ್ರಿಸಿರಿ.

ಕನ್ಯಾ:ಇಂದು, ನೀವು ಅತ್ಯಂತ ಉತ್ಸಾಹ ಮತ್ತು ಶಕ್ತಿಯುತವಾಗಿದ್ದೀರಿ. ನಿಮ್ಮ ದಕ್ಷತೆ ಮತ್ತು ಬುದ್ಧಿಮತ್ತೆ ನಿಮ್ಮನ್ನು ಶ್ರೇಷ್ಠ ಕಲಾವಿದನಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ನಿಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತಂದರೆ ಸೃಜನಶೀಲತೆ ಅಪಾರವಾಗಿ ಹರಿಯುತ್ತದೆ. ನೀವು ಹಾಡಿರಿ ಅಥವಾ ಕುಣಿಯಿರಿ ಅದು ನಿಖರ ಮತ್ತು ಕರಾರುವಾಕ್ಕಾಗಿರಬೇಕು. ಪ್ರದರ್ಶನ ಕಲೆ ಅಥವಾ ಸೃಜನಶೀಲ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೀರಿ.

ತುಲಾ: ನಿಮ್ಮಲ್ಲಿರುವ ಒಳಗಿನ ಕಲಾವಿದ ಇಂದು ಮೇಲೆ ಬರುತ್ತಾನೆ ಮತ್ತು ನೀವು ನಿಮ್ಮ ಕಲ್ಪಾಶಕ್ತಿಯನ್ನೂ ಪ್ರದರ್ಶಿಸುತ್ತೀರಿ. ನೀವು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಮತ್ತಷ್ಟು ಮುಂದೆ ಸಾಗುತ್ತಾರೆ. ನೀವು ಇಂದು ಅನುಕೂಲಕರ ಕಾನೂನು ವ್ಯವಹಾರಗಳನ್ನು ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.

ವೃಶ್ಚಿಕ : ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ನೀವು ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯದ ಪ್ರಾರಂಭ ಮಾಡುತ್ತೀರಿ.

ಧನು:ಸಂಪೂರ್ಣ ಜಾಗರೂಕತೆಯ ದಿನವಾಗಿದೆ. ನಿಮ್ಮ ಹೃದಯ ಅದರ ಸಂಗಾತಿಯನ್ನು ಕಂಡುಕೊಳ್ಳುವ ದಿನವಾಗಿದ್ದು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ನೀವು ಪ್ರಣಯದೇವತೆಯ ಮುಂದಿನ ಬಲಿಪಶು. ಆದಾಗ್ಯೂ, ನಿಮ್ಮ ಹೆಜ್ಜೆಗಳನ್ನು ಗಮನಿಸಿ, ಬಾಂಧವ್ಯದ ಪ್ರಾರಂಭಿಕ ಹಂತಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಅಲ್ಲದೆ, ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಬೇಕಾದ ಸಮಯವಾಗಿದೆ.

ಮಕರ :ನೀವು ಅತ್ಯಂತ ಒತ್ತಡದಲ್ಲಿರುತ್ತೀರಿ. ನಿಮ್ಮ ಕೆಲಸದ ಬೇಡಿಕೆಗಳಿಂದ ಕೈ ಕಟ್ಟಿರುವುದರಿಂದ ನಿಮಗೆ ನಿಮ್ಮ ಕುರಿತು ಆಲೋಚಿಸುವುದೂ ಬಹಳ ಕಷ್ಟವಾಗಿದೆ. ನೀವು ಸೃಜನಶೀಲರಾಗಲು ಬಯಸಿದರೆ ಕಾರ್ಯದೊತ್ತಡದಿಂದ ಅಂತಹ ಸ್ವಾತಂತ್ರ್ಯ ದೊರೆಯುವುದಿಲ್ಲ. ನೀವು ಸಮಯ ನಿರ್ವಹಣೆಯ ಕಲೆಯನ್ನು ಕಲಿತಿದ್ದೀರಿ. ಆದ್ದರಿಂದ, ನೀವು ನಿಮ್ಮ ಆದ್ಯತೆಗಳನ್ನು ಸರಿಯಾಗಿ ರೂಪಿಸಿಕೊಂಡಿದ್ದೀರಿ ಮತ್ತು ನಿಮಗಾಗಿ ಯಶಸ್ಸು ಕಾಯುತ್ತಿದೆ.

ಕುಂಭ:ಇಂದು ನೀವು ಸರಿಯಾಗಿ ಗುರಿ ಇಟ್ಟು ಹೊಡೆಯುತ್ತೀರಿ. ಅತ್ಯಂತ ಸಣ್ಣದರಿಂದ ದೊಡ್ಡದರವರೆಗೆ, ನಿಮ್ಮ ಎಲ್ಲ ಯೋಜನೆಗಳೂ ವಾಸ್ತವಗೊಳ್ಳುತ್ತವೆ. ನಿಮ್ಮ ದಾರಿಯಲ್ಲಿ ಕೆಲ ಅಡೆತಡೆಗಳಿದ್ದರೆ ನಿರಾಶೆಗೊಳ್ಳಬೇಡಿ; ನೀವು ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದೀರಿ ಮತ್ತು ವಿಜಯೋತ್ಸಾಹದಿಂದ ಹೊರಬರುತ್ತೀರಿ. ನಿಮ್ಮನ್ನು ಅತ್ಯಂತ ಉತ್ಸಾಹದಲ್ಲಿರಿಸಿ, ಖಂಡಿತವಾಗಿಯೂ ನೀವು ಯಶಸ್ವಿಯಾಗುತ್ತೀರಿ.

ಮೀನ: ನಿಮ್ಮ ಗ್ರಹಗಳ ಜೋಡಣೆ ಪೂರಕವಾಗಿಲ್ಲ, ನೀವು ಇಂದು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಉತ್ತಮವಲ್ಲ. ಇಂದು ಯಾವುದೇ ಯೋಜನೆಯಿಂದ ಪಡೆಯುವ ಅನುಕೂಲಗಳು ಅದರೊಂದಿಗೆ ಒಳಗೊಂಡಿರುವ ರಿಸ್ಕ್ ಗಳಿಂದಾಗಿ ಸಮರ್ಥನೀಯವಲ್ಲ. ವ್ಯಾಪಾರದಲ್ಲಿರುವ ಜನರು ತಮ್ಮ ಎಲ್ಲ ವ್ಯವಹಾರಗಳಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನ ದೇವರ ಕೃಪೆಯಿಂದ ಶಾಂತಿಯುತವಾಗಿರುತ್ತದೆ.

ABOUT THE AUTHOR

...view details