ಕರ್ನಾಟಕ

karnataka

ETV Bharat / bharat

ದಶಕಗಳ ಕನಸು ನನಸಾಗಿದ್ದಕ್ಕೆ ಇಡೀ ದೇಶವೇ ಆನಂದದ ಕಡಲಲ್ಲಿ ತೇಲುತ್ತಿದೆ: ಮೋಹನ್ ಭಾಗವತ್​

ಮೂವತ್ತು ವರ್ಷಗಳ ಶ್ರಮದ ಫಲ ಇವತ್ತು ನಮಗೆ ಸಿಕ್ಕಿದೆ. ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವತ್ತು ನಮ್ಮ ಸಂಕಲ್ಪ ಪೂರ್ಣವಾಗಿದೆ..

By

Published : Aug 5, 2020, 2:47 PM IST

Updated : Aug 5, 2020, 4:52 PM IST

Mohan Bhagavat speech on Ram mandir
ದಶಕಗಳ ಕನಸು ನನಸಾಗಿದ್ದಕ್ಕೆ ಇಡೀ ದೇಶವೇ ಆನಂದದ ಕಡಲಲ್ಲಿ ತೇಲುತ್ತಿದೆ: ಮೋಹನ್ ಭಾಗವತ್​

ಅಯೋಧ್ಯೆ :ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿದ ಬಳಿಕ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಮಾತನಾಡಿದರು. ಇವತ್ತಿನ ಈ ಕ್ಷಣ ಆನಂದದ ಕ್ಷಣ ಎಂದರು. ರಾಮ ಮಂದಿರ ನಿರ್ಮಾಣಕ್ಕೆ 20 ರಿಂದ 30 ವರ್ಷಗಳ ಕಾಲ ಶ್ರಮಪಡಬೇಕು ಎಂದು ಅಂದು ಆರ್​ಎಸ್​ಎಸ್​ ಮುಖ್ಯಸ್ಥರಾಗಿದ್ದ ದೇವವ್ರತ​ ಹೇಳಿದ್ದರು. ದೇವವ್ರತ ಅವರ ಅಭಿಪ್ರಾಯದಂತೆ 30ನೇ ವರ್ಷದ ಆರಂಭದಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು.

ದಶಕಗಳ ಕನಸು ನನಸಾಗಿದ್ದಕ್ಕೆ ಇಡೀ ದೇಶವೇ ಆನಂದದ ಕಡಲಲ್ಲಿ ತೇಲುತ್ತಿದೆ: ಮೋಹನ್ ಭಾಗವತ್​

''ಮೂವತ್ತು ವರ್ಷಗಳ ಶ್ರಮದ ಫಲ ಇವತ್ತು ನಮಗೆ ಸಿಕ್ಕಿದೆ. ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವತ್ತು ನಮ್ಮ ಸಂಕಲ್ಪ ಪೂರ್ಣವಾಗಿದೆ. ಈಗ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದೆ'' ಎಂದು ಮೋಹನ್​ ಭಾಗವತ್​ ಹೇಳಿದರು. ''ದಶಕಗಳ ಕನಸು ನನಸಾಗಿದ್ದಕ್ಕೆ ಇಡೀ ದೇಶವೇ ಇವತ್ತು ಆನಂದದ ಕಡಲಲ್ಲಿ ತೇಲುತ್ತಿದೆ'' ಎಂದರು.

ಮಹಾಮಾರಿ ಕೊರೊನಾದಿಂದಾಗಿ ಈ ಕಾರ್ಯಕ್ರಮಕ್ಕೆ ಹಲವರಿಗೆ ಬರಲು ಸಾಧ್ಯವಾಗಿಲ್ಲ. ಮಾಜಿ ಉಪ ಪ್ರಧಾನಿ ಎಲ್​.ಕೆ. ಅಡ್ವಾಣಿಯವರಿಗೂ ಬರಲಾಗಲಿಲ್ಲ ಎಂದರು. 'ಆತ್ಮ ನಿರ್ಭರ' ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಮಹಾಮಾರಿ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳಲು ಇಡೀ ವಿಶ್ವ ಹೊಸ ಹೊಸ ಮಾರ್ಗೋಪಾಯಗಳನ್ನು ಹುಡುಕುತ್ತಿದೆ ಎಂದು ಹೇಳಿದರು.

Last Updated : Aug 5, 2020, 4:52 PM IST

ABOUT THE AUTHOR

...view details