ಕರ್ನಾಟಕ

karnataka

ETV Bharat / bharat

ಮೋದಿ 2.0 ನಲ್ಲಿ ಕೋಟ್ಯಾಂತರ ಶ್ರೀಸಾಮನ್ಯರಿಗೆ ಉಡಾನ್​ ಇನ್ನೂ ಹತ್ತಿರ?

ಉಡಾನ್​ನ ಉದ್ದೇಶಿತ ಯೋಜನೆಗಳು ಕಾರ್ಯರೂಪಕ್ಕೆ ತರುವ ಕೊರತೆಗಳಿಗೆ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ. ಯೋಜನೆ ಕಾರ್ಯಸಾಧು ಬಗ್ಗೆ ಸಮರ್ಥವಾಗಿ ವಾದ ಮಂಡಿಸಿ ಪ್ರಾಧಿಕಾರದ ಮೂಲಕ ಅನುಮೋದನೆ ಪಡೆಯುತ್ತೇವೆ ಎಂಬ ವಿಶ್ವಾಸವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

By

Published : May 30, 2019, 2:18 PM IST

ಸಾಂದರ್ಭಿಕ ಚಿತ್ರ

ನವದೆಹಲಿ:ಗುರುವಾರ ಎರಡನೇ ಅವಧಿಗೆ ಪ್ರಮಾಣ ವಚ್ಚನ ಸ್ವೀಕರಿಸಲು ಅಣಿಯಾಗಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ 2.0 ಆಡಳಿತಾವಧಿಯಲ್ಲಿ ಉಡಾನ್​ ಯೋಜನೆಗೆ ಇನ್ನಷ್ಟು ಬಲ ತುಂಬಲಿದ್ದಾರೆ ಎಂದು ಯೋಜನೆ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.

ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದು, ಕೋಟ್ಯಂತರ ಜನಸಾಮಾನ್ಯರನ್ನು ವಾಯುಯಾನಕ್ಕೆ ಪರಿಚಯಿಸುವ ಪ್ರಸ್ತಾವನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧಪಡಿಸಿದೆ. ಈ ಯೋಜನೆಗೆ ಹೆಚ್ಚುವರಿ ಫಂಡ್​ ಪಡೆದು ಉಡಾನ್ ರೆಕ್ಕೆಯನ್ನು ಮತ್ತಷ್ಟು ಬಲಗೊಳಿಸುವ ಕಾರ್ಯತಂತ್ರ ಹೆಣೆದಿದೆ.

ಉಡಾನ್​ನ ಉದ್ದೇಶಿತ ಯೋಜನೆಗಳು ಕಾರ್ಯರೂಪಕ್ಕೆ ತರುವ ಕೊರತೆಗಳಿಗೆ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ. ಯೋಜನೆ ಕಾರ್ಯಸಾಧು ಬಗ್ಗೆ ಸಮರ್ಥವಾಗಿ ವಾದ ಮಂಡಿಸಿ ಪ್ರಾಧಿಕಾರದ ಮೂಲಕ ಅನುಮೋದನೆ ಪಡೆಯುತ್ತೇವೆ ಎಂಬ ವಿಶ್ವಾಸವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಪ್ರಾದೇಶಿಕವಾಗಿ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳ ಕಾರ್ಯಾಚರಣೆ ಆರಂಭವಾಗಿದೆ. ಸದ್ಯ ಲಭ್ಯವಿರುವ ಅನುದಾನ ಸಾಕಾಗುತ್ತಿಲ್ಲ. ಹೆಚ್ಚಿನ ಫಂಡ್​ಗೆ ಬೇಡಿಕೆ ಇರಿಸಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ) ಉಡಾನ್ ಯೋಜನೆ ಅನುಷ್ಠಾನಕ್ಕೆ ವಾರ್ಷಿಕ ಒಟ್ಟು ₹ 1,800- ₹ 2,000 ಕೋಟಿಯಷ್ಟು ಸಬ್ಸಿಡಿ ಒದಗಿಸುತ್ತಿದೆ.

ಕೇಂದ್ರ ಸರ್ಕಾರ ಜನಸಾಮನ್ಯರು ಕೂಡ ಕಡಿಮೆ ಶುಲ್ಕದಲ್ಲಿ ವಿಮಾನ ಸೇವೆ ಪಡೆಯಬೇಕು ಎಂಬ ಆಶಯದಿಂದ ಟಿಕೆಟ್​ ಮೇಲೆ ಕಡಿಮೆ ತೆರಿಗೆ ದರ, ಏರ್​ಪೋರ್ಟ್​ ಶುಲ್ಕದಲ್ಲಿ ರಿಯಾಯಿತಿ ಸೇರಿದಂತೆ ಇತರೆ ಸೌಕರ್ಯ ಉಡಾನ್ ಯೋಜನೆಯಡಿ ಕಲ್ಪಿಸುತ್ತಿದೆ.

For All Latest Updates

TAGGED:

ABOUT THE AUTHOR

...view details