ಕರ್ನಾಟಕ

karnataka

ಕಾರು ಅಪಘಾತ: ಹಿರಿಯ ಐಪಿಎಸ್​ ಅಧಿಕಾರಿ ಪ್ರಾಣಾಪಾಯದಿಂದ ಪಾರು

ಹಿರಿಯ ಐಪಿಎಸ್ ಅಧಿಕಾರಿ ಶ್ರೀನಿವಾಸ ರಾವ್ ಅವರು ಮನೆಗೆ ತೆರಳುತ್ತಿದ್ದಾಗ ಹೈದರಾಬಾದ್‌ನ ಔಟರ್​​ ರಿಂಗ್​ ರಸ್ತೆಯಲ್ಲಿ ಅವರ ವಾಹನ ಅಪಘಾತಕ್ಕೀಡಾಗಿದೆ. ಅವರನ್ನು ಗಚಿಬೌಲಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

By

Published : Jul 16, 2020, 4:59 AM IST

Published : Jul 16, 2020, 4:59 AM IST

ETV Bharat / bharat

ಕಾರು ಅಪಘಾತ: ಹಿರಿಯ ಐಪಿಎಸ್​ ಅಧಿಕಾರಿ ಪ್ರಾಣಾಪಾಯದಿಂದ ಪಾರು

Miraculous escape for Hyderabad senior IPS officer in road mishap
ಕಾರು ಅಪಘಾತ

ಹೈದರಾಬಾದ್​: ಹಿರಿಯ ಐಪಿಎಸ್ ಅಧಿಕಾರಿ ಮತ್ತು ತೆಲಂಗಾಣ ರಾಜ್ಯ ಪೊಲೀಸ್ ನೇಮಕಾತಿ ಮಂಡಳಿ ಅಧ್ಯಕ್ಷ ವಿ.ವಿ.ಶ್ರೀನಿವಾಸ ರಾವ್ ಅವರ ಅಧಿಕೃತ ವಾಹನವು ಪಲ್ಟಿಯಾಗಿದ್ದು, ಶ್ರೀನಿವಾಸ ರಾವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಿರಿಯ ಐಪಿಎಸ್​ ಅಧಿಕಾರಿ ವಿ.ವಿ.ಶ್ರೀನಿವಾಸ ರಾವ್ ಕಾರು ಅಪಘಾತ

ಶ್ರೀನಿವಾಸ ರಾವ್ ಅವರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಹೈದರಾಬಾದ್‌ನ ಔಟರ್​​ ರಿಂಗ್​ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅವರನ್ನು ಗಚಿಬೌಲಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಶ್ರೀನಿವಾಸ್ ರಾವ್ 1987ರ ಐಪಿಎಸ್ ಬ್ಯಾಚ್‌ಗೆ ಸೇರಿದವರಾಗಿದ್ದು, ಅವರು ತೆಲಂಗಾಣ ರಾಜ್ಯ ಪೊಲೀಸ್ ನೇಮಕಾತಿ ಮಂಡಳಿಯ ಅಧ್ಯಕ್ಷರು ಮತ್ತು ರಾಜ್ಯ ಪೊಲೀಸ್ ಅಕಾಡೆಮಿಯ ಉಸ್ತುವಾರಿ ನಿರ್ದೇಶಕರಾಗಿದ್ದಾರೆ.

ABOUT THE AUTHOR

...view details