ಕರ್ನಾಟಕ

karnataka

ಲಾಕ್​ಡೌನ್​ ಜಾರಿ ನಂತರ ಪ್ರಯಾಣ ಬೆಳೆಸಿದ ದೇಶದ ಮೊದಲ ರೈಲು.. ಪ್ರಯಾಣಿಕರು ಯಾರು?

By

Published : May 1, 2020, 12:06 PM IST

ಲಾಕ್​ಡೌನ್​ ಜಾರಿ ಮಾಡಿರುವ ಕಾರಣ ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಉಳಿದುಕೊಂಡಿರುವುದರಿಂದ ಅವರನ್ನು ತವರು ರಾಜ್ಯಕ್ಕೆ ಕಳುಹಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿರುವ ಬೆನ್ನಲ್ಲೇ ವಿವಿಧ ರಾಜ್ಯಗಳು ಈ ಕೆಲಸ ಮಾಡುತ್ತಿವೆ.

migrant labours
migrant labours

ನವದೆಹಲಿ:ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳನ್ನು ಅವರ ತವರು ರಾಜ್ಯಗಳಿಗೆ ತಲುಪಿಸುವಂತೆ ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದು, ಅದರಂತೆ ವಲಸೆ ಕಾರ್ಮಿಕರನ್ನು ಹೊತ್ತು ವಿಶೇಷ ರೈಲು ಇಂದು ಬೆಳಗ್ಗೆ ಪ್ರಯಾಣ ಬೆಳೆಸಿದೆ.

ತೆಲಂಗಾಣದ ಲಿಗಂಪಲ್ಲಿ ರೈಲ್ವೆ ಸ್ಟೇಷನ್​​ನಿಂದ ಈ ವಿಶೇಷ ರೈಲು ಕೂಲಿ ಕಾರ್ಮಿಕರನ್ನು ಹೊತ್ತು ಜಾರ್ಖಂಡ್​ಗೆ ಪ್ರಯಾಣ ಬೆಳೆಸಿದ್ದಾಗಿ ತೆಲಂಗಾಣ ಸರ್ಕಾರ ಮಾಹಿತಿ ನೀಡಿದೆ. ರೈಲ್ವೆ ಇಲಾಖೆ ನೀಡಿರುವ ಮಾರ್ಗಸೂಚಿ ಪ್ರಕಾರ ಎಲ್ಲ ಪ್ಯಾಸೆಂಜರ್​ಗಳಿಗೆ ಸ್ಕ್ರೀನಿಂಗ್​ ನಡೆಸಿ, ಸಾಮಾಜಿಕ ಅಂತರದೊಂದಿಗೆ ರೈಲಿನಲ್ಲಿರಿಸಿಕೊಂಡು ಪ್ರಯಾಣ ಆರಂಭಿಸಿದೆ. ವಿಶೇಷ ರೈಲಿನಲ್ಲಿ 1,200 ವಲಸೆ ಕಾರ್ಮಿಕರು ಇದ್ದು, 24 ಬೋಗಿಗಳಿವೆ. ಬೆಳಗ್ಗೆ 4:50ಕ್ಕೆ ಈ ರೈಲು ಪ್ರಯಾಣ ಬೆಳೆಸಿದೆ ಎಂದು ತಿಳಿದು ಬಂದಿದೆ.

ವಲಸೆ ಕಾರ್ಮಿಕರ ಹೊತ್ತು ಸಾಗಿದ ವಿಶೇಷ ರೈಲು

ದೇಶದಲ್ಲಿ ಲಾಕ್​ಡೌನ್​ ಆದೇಶ ಹೊರಬಿದ್ದ ಬಳಿಕ ಇದೇ ಮೊದಲ ರೈಲು ಪ್ರಯಾಣ ಬೆಳೆಸಿದ್ದು, ಅನೇಕ ವಲಸೆ ಕಾರ್ಮಿಕರು ಇದರಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡುತ್ತಿದ್ದಂತೆ ಪಂಜಾಬ್​, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ನವದೆಹಲಿ ಸೇರಿದಂತೆ ಅನೇಕ ರಾಜ್ಯಗಳು ವಲಸೆ ಕಾರ್ಮಿಕರನ್ನ ವಿವಿಧ ರಾಜ್ಯಗಳಿಗೆ ಬಿಟ್ಟು ಬರುವ ನಿರ್ಧಾರ ಕೈಗೊಂಡಿದ್ದು, ಅದಕ್ಕಾಗಿ ನೊಡಲ್​ ಅಧಿಕಾರಗಳ ನೇಮಕ ಮಾಡಿದೆ.

ದೇಶದಲ್ಲಿ ಮಾರ್ಚ್​ 25ರಿಂದ ಲಾಕ್​ಡೌನ್​ ಹೇರಲಾಗಿದ್ದು, ಅಂದಿನಿಂದಲೂ ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದು, ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಅದರ ಪಾಲನೆ ಮಾಡಲು ಎಲ್ಲ ರಾಜ್ಯ ಮುಂದಾಗಿವೆ.

ABOUT THE AUTHOR

...view details