ಕರ್ನಾಟಕ

karnataka

ETV Bharat / bharat

ನವಡಾ ಬಿಟ್ಟು ಬೇಗುಸರೈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌- ಸ್ವಾಭಿಮಾನಕ್ಕೆ ಧಕ್ಕೆ ಎಂದ ಕೇಂದ್ರ ಮಂತ್ರಿ ಗಿರಿರಾಜ್ - ಗಿರಿರಾಜ್​ ಸಿಂಗ್

ನವಡಾ ಟಿಕೆಟ್​ ನೀಡದೇ ಬೇಗುಸರೈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡುತ್ತಿದ್ದಂತೆಯೇ ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ ಬಿಹಾರ ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವಡಾ ಟಿಕೆಟ್​ ನೀಡಲಿಲ್ಲವೆಂದು ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಗಿರಿರಾಜ್​ ಸಿಂಗ್

By

Published : Mar 26, 2019, 11:28 AM IST

ನವದೆಹಲಿ:ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಹಾರದ ನವಡಾದಿಂದ ತಮಗೆ ಟಿಕೆಟ್​ ನೀಡಲಿಲ್ಲವೆಂದು ಕೇಂದ್ರ ಸಚಿವ ಗಿರಿರಾಜ್​ ಸಿಂಗ್ ಬಹಿರಂಗವಾಗಿ ರಾಜ್ಯದ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವಡಾ ಕ್ಷೇತ್ರದಿಂದಲೇ ಗಿರಿರಾಜ್​ ಸಿಂಗ್‌ 2014ರ ಚುಣಾವಣೆಯಲ್ಲಿ ಜಯ ಗಳಿಸಿ, ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ಖಾತೆ ಸಚಿವರೂ ಆಗಿದ್ದಾರೆ. ಆದರೂ ತಮಗೆ ಈ ಬಾರಿ ನವಡಾದಿಂದ ಸ್ಪರ್ಧಿಸಲು ಟಿಕೆಟ್​ ನೀಡಿಲ್ಲವೆಂದು ಬಿಹಾರ ಬಿಜೆಪಿ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನವಡಾ ಟಿಕೆಟ್​ ನೀಡಲಿಲ್ಲವೆಂದು ಬಿಜೆಪಿ ವಿರುದ್ಧ ಕೇಂದ್ರ ಸಚಿವ ಗಿರಿರಾಜ್​ ಸಿಂಗ್ ಅಸಮಾಧಾನ

ನನಗೆ ಬಿಹಾರದ ಬಿಜೆಪಿ ನಾಯಕತ್ವದ ಬಗ್ಗೆ ಮಾತ್ರ ಬೇಸರವಿದೆ. ನನ್ನ ಅನುಮತಿ ಇಲ್ಲದೆಯೇ ನವಡಾ ಬದಲಾಗಿ ಬೇಗುಸರೈನಿಂದ ಸ್ಪರ್ಧಿಸಲು ನನ್ನ ಹೆಸರು ಘೋಷಿಸಲಾಗಿದೆ. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಎಎನ್​​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.1996ರಲ್ಲಿ ಹಾಗೂ 2014ರಲ್ಲಿ ಬೇಗುಸರೈನಿಂದ ಸ್ಪರ್ಧಿಸುವ ಇಚ್ಛೆ ಇತ್ತು. ಆದರೆ, ಭೋಲಾ ಸಿಂಗ್​ರಿಗೆ ಅಲ್ಲಿಂದ ಟಿಕೆಟ್​ ನೀಡಲಾಯಿತು. ನವಡಾದಿಂದ ನಾನು ಸ್ಪರ್ಧಿಸಿದೆ. ಅಲ್ಲಿನ ಜನರಿಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಬಿಹಾರದ ಬಿಜೆಪಿ ಈ ಬಗ್ಗೆ ನನಗೆ ಉತ್ತರಿಸಬೇಕು. ಇದರಿಂದ ನನಗೆ ತುಂಬಾ ನೋವಾಗಿದೆ. ಸ್ವಾಭಿಮಾನದೊಂದಿಗೆ ರಾಜಿಯ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ.ಬಿಜೆಪಿ ಮುಖಂಡ ಚಿರಾಗ್​ ಪಸ್ವಾನ್​ ಹಾಗೂ ಬಿಹಾರದ ಬಿಜೆಪಿ ಮುಖ್ಯಸ್ಥ ನಿತ್ಯಾನಂದ ರಾಯ್​ ನನ್ನಿಷ್ಟದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಹೀಗಾಗಿದೆ ಎಂದು ಬೇಸರದಿಂದ ನುಡಿದರು.

ABOUT THE AUTHOR

...view details