ಕರ್ನಾಟಕ

karnataka

ETV Bharat / bharat

ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನ ನಾನು ಬದಲಾಯಿಸುವುದಿಲ್ಲ: ಉದ್ಧವ್ ಠಾಕ್ರೆಗೆ ರಾಜ್ ಟಾಂಗ್​​ - ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನ ಆಚರಣೆ

ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಮರನ್ನ ಹೊರಹಾಕಲು ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಿಳಿಸಿದ್ದಾರೆ.

MH-Raj Thackeray on CAA, Hindutwa, Goregaon, Mumbai
ಉದ್ಧವ್ ಠಾಕ್ರೆಗೆ ರಾಜ್ ಠಾಕ್ರೆ ಟಾಂಗ್​​

By

Published : Jan 23, 2020, 11:59 PM IST

ಮುಂಬೈ(ಮಹಾರಾಷ್ಟ್ರ) : ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನದಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪಕ್ಷದ ಹೊಸ ಧ್ವಜ ಅನಾವರಣ ಮಾಡಿದ್ದಾರೆ.

ಉದ್ಧವ್ ಠಾಕ್ರೆಗೆ ರಾಜ್ ಠಾಕ್ರೆ ಟಾಂಗ್​​

ಗೋರೆಗಾಂವ್‌ನಲ್ಲಿರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಂರನ್ನು ಹೊರಹಾಕಲು ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ರು. ಇದೇ ವೇಳೆ "ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನು ನಾನು ಬದಲಾಯಿಸುವುದಿಲ್ಲ" ಎಂದು ಕಾಂಗ್ರೆಸ್ ಮತ್ತು ಎನ್​ಸಿಪಿ ಸಹಾಯದಿಂದ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿದ್ದ ಉದ್ಧವ್ ಠಾಕ್ರೆ ಅವರಿಗೆ ಟಾಂಗ್​​ ನೀಡಿದ್ರು.

ಇನ್ನು ಹೊಸ ಕೇಸರಿ ಧ್ವಜದ ಮಧ್ಯಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆ ಹೊಂದಿದೆ. ರಾಜಮುದ್ರೆ ಎಂಬುದು ಅಧಿಕೃತ ಚತ್ರಪತಿ ಶಿವಾಜಿ ಮಹಾರಾಜರು ಪತ್ರಗಳಲ್ಲಿ ಬಳಸುತ್ತಿದ್ದ ರಾಜಮುದ್ರೆಯಾಗಿದೆ.

ABOUT THE AUTHOR

...view details