ಶಿಲ್ಲಾಂಗ್(ಮೇಘಾಲಯ):ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಹೋರಾಟ ಸದ್ಯ ಮೇಘಾಲಯಕ್ಕೂ ವ್ಯಾಪಿಸಿದೆ. ಒಂದೆಡೆ ಅಸ್ಸೋಂ ಹೊತ್ತಿ ಉರಿಯುತ್ತಿದ್ದರೆ, ಮೇಘಾಲಯಕ್ಕೂ ಈ ಕಿಚ್ಚು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಮೇಘಾಲಯ ರಾಜ್ಯದಲ್ಲಿ ಎಸ್ಎಂಎಸ್ ಹಾಗೂ ಇಂಟರ್ನೆಟ್ ಸೇವೆಯನ್ನು ಮುಂದಿನ ಎರಡು ದಿನಗಳಿಗೆ ಸ್ಥಗಿತಗೊಳಿಸಲಾಗಿದೆ. ಅಸ್ಸೋಂನಲ್ಲಿ ತೆಗೆದುಕೊಂಡಂತೆ ಇಲ್ಲೂ ಸಹ ಎಚ್ಚರಿಕೆ ವಹಿಸಲಾಗಿದೆ.
ಪೌರತ್ವ ತಿದ್ದುಪಡಿ ಮಸೂದೆಗೆ ರಾಮ್ ನಾಥ್ ಕೋವಿಂದ್ ಅಂಕಿತ
ಮೇಘಾಲಯ ರಾಜಧಾನಿ ಶಿಲ್ಲಾಂಗ್ನಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಶಿಲ್ಲಾಂಗ್ನಲ್ಲಿ ಎರಡು ಕಾರಿಗೆ ಬೆಂಕಿ ಹಾಕಲಾಗಿದೆ. ಬೃಹತ್ ಮಟ್ಟದಲ್ಲಿ ಟಾರ್ಚ್ಲೈಟ್ ಜಾಥಾ ಮೇಘಾಲಯದ ರಾಜಧಾನಿಯಲ್ಲಿ ಈಗಾಗಲೇ ನಡೆದಿದೆ.
ಗಾಳಿ ಸುದ್ದಿಗೆ ಕಿವಿಗೊಡದಂತೆ ಮೇಘಾಲಯ ಪೊಲೀಸರು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಪ್ರತಿಭಟನೆಯನ್ನು ತಹಬದಿಗೆ ತರುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ಬಲಿ