ಕರ್ನಾಟಕ

karnataka

ETV Bharat / bharat

ನೋಟ್​ ಬ್ಯಾನ್​ ನಿಷೇಧಕ್ಕೆ ಭಾರೀ ಟೀಕೆ... ನೊಬೆಲ್​ ಪುರಸ್ಕೃತ ಬ್ಯಾನರ್ಜಿ ಬಗ್ಗೆ ನಿಮಗೇನು ಗೊತ್ತು!? - ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಮೂಲದ ಅಭಿಜಿತ್​ ಬ್ಯಾನರ್ಜಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಲಭ್ಯವಾಗಿದ್ದು, ಭಾರತದಲ್ಲೇ ಹುಟ್ಟಿ ಬೆಳೆದ ಅವರ ಮಾಹಿತಿ ಇಲ್ಲಿದೆ.

ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ

By

Published : Oct 14, 2019, 5:43 PM IST

Updated : Oct 14, 2019, 6:00 PM IST

ನವದೆಹಲಿ:ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಸಿಕ್ಕಿದ್ದು, ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದಕ್ಕಾಗಿ ಅವರಿಗೆ ಈ ಗೌರವ ಲಭಿಸಿದೆ.

ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ

21 ಫೆಬ್ರವರಿ 1961ರಲ್ಲಿ ಕೋಲ್ಕತ್ತಾದಲ್ಲಿ ಜನಸಿರುವ ಬ್ಯಾನರ್ಜಿ ವ್ಯಾಸಂಗ ಮಾಡಿದ್ದು ಭಾರತದಲ್ಲೇ. ಆರಂಭದ ದಿನಗಳಲ್ಲಿ ಪಾಯಿಂಟ್​ ಸ್ಕೂಲ್​ ಮತ್ತು ಪ್ರೆಸಿಡೆನ್ಸಿ ಕಾಲೇಜ್​​ನಲ್ಲಿ ವ್ಯಾಸಂಗ ಮಾಡಿದ್ದ ಇವರು, 1981ರಲ್ಲಿ ಕ್ಯಾಲಿಕಟ್​​ ವಿಶ್ವವಿದ್ಯಾಲಯದ ಪ್ರೆಸಿಡೆನ್ಸಿ ಕಾಲೇಜ್​​ನಿಂದ ಬಿಎಸ್ಸಿ ಪದವಿ ಪಡೆದುಕೊಳ್ಳುತ್ತಾರೆ. ತದನಂತರ ಹಾರ್ವರ್ಡ್​ ವಿಶ್ವವಿದ್ಯಾಲಯದಿಂದ 1988ರಲ್ಲಿ ಪಿಹೆಚ್​ಡಿ ಪಡೆದುಕೊಂಡಿದ್ದು, ಅದಕ್ಕೂ ಮೊದಲು 1983ರಲ್ಲಿ ನವದೆಹಲಿಯ ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಾಸ್​ ಮಾಡಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರ ತಂದೆ-ತಾಯಿ ಇಬ್ಬರೂ ಅರ್ಥಶಾಸ್ತ್ರಜ್ಞರೇ ಎಂಬುದು ಗಮನಾರ್ಹ ಸಂಗತಿ.

ಸದ್ಯ ಅಮೆರಿಕ ಮೂಲದ ಎಂಐಟಿಯಲ್ಲಿ ಫೋರ್ಡ್​ ಪೌಂಡೇಶನ್​ ಇಂಟರ್​ನ್ಯಾಷನಲ್​ ಅರ್ಥಶಾಸ್ತ್ರಜ್ಞ ವಿಭಾಗದ ಪ್ರೊಫೆಸರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ನೋಟ್​​ ಬ್ಯಾನ್​ ಮಾಡಿದ್ದಾಗ ಅದನ್ನು ಬ್ಯಾನರ್ಜಿ ಟೀಕೆ ಸಹ ಮಾಡಿದ್ದರು. ಭಾರತದಲ್ಲಿನ ಡಿಮಾನಿಟೈಸೆಷನ್ ನಿರ್ಧಾರದ ಬಗ್ಗೆ ನನಗೆ ಅರ್ಥವೇ ಆಗಿಲ್ಲ. ಹೊಸ 2000 ರೂ ಮುಖಬೆಲೆಯ ನೋಟು ಜಾರಿಗೆ ತಂದಿರುವ ನಿರ್ಧಾರದ ಹಿಂದಿನ ಉದ್ದೇಶವೇ ನನಗೆ ತಿಳಿದಿಲ್ಲ ಎಂದಿದ್ದರು.

ಮಗನಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿಜಿತ್​ ಬ್ಯಾನರ್ಜಿ ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರಿಗೆ ನೊಬೆಲ್​ ಪ್ರಶಸ್ತಿ ಸಿಕ್ಕಿರುವುದು ನಮ್ಮ ಕುಟುಂಬಕ್ಕೆ ಸಿಕ್ಕಿರುವ ದೊಡ್ಡ ಗೆಲುವು ಎಂದಿದ್ದಾರೆ.

ಇವರಿಗೆ ನೊಬೆಲ್​ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​,ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಿಪಿಐ(ಎಂ) ಮುಖಂಡ ಸೀತಾರಾಮ್​ ಯಚೂರಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

Last Updated : Oct 14, 2019, 6:00 PM IST

ABOUT THE AUTHOR

...view details