ಕರ್ನಾಟಕ

karnataka

ETV Bharat / bharat

ಬಾಲಕೋಟ್​ ದಾಳಿಯಲ್ಲೂ ಪರಿಕ್ಕರ್ ಪಾತ್ರ ಮಹತ್ವದ್ದಾಗಿತ್ತು... ಅಚ್ಚರಿ ಮೂಡಿಸಿದ ರಾಜನಾಥ್​ ಸಿಂಗ್​ ಹೇಳಿಕೆ

ವಾಯುದಾಳಿಯಲ್ಲೂ ಮನೋಹರ್ ಪರಿಕ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

By

Published : Mar 28, 2019, 8:58 PM IST

ರಾಜನಾಥ್​ ಸಿಂಗ್

ಪಣಜಿ:ದಿವಂಗತ ಮನೋಹರ್ ಪರಿಕ್ಕರ್ ಇತ್ತೀಚೆಗೆ ಭಾರತದ ವಾಯುಸೇನೆ ನಡೆಸಿದ ವಾಯುದಾಳಿಯ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಗೃಹ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ.

ಉರಿ ದಾಳಿಯ ಬಳಿಕ ಪ್ರಧಾನಿ ಮೋದಿ ನನ್ನನ್ನೂ ಸೇರಿ ಮೂವರಿಗೆ ಕರೆ ಮಾಡಿದ್ದರು. ಈ ವೇಳೆ ಪರಿಕ್ಕರ್ ಮುಖದಲ್ಲಿ ಆಕ್ರೋಶ ಎದ್ದು ಕಾಣಿಸುತ್ತಿತ್ತು. ನಂತರ ನಡೆದ ಸರ್ಜಿಕಲ್ ಸ್ಟ್ರೈಕ್​ನ ರೂಪುರೇಷೆ ಹಾಗೂ ಸರ್ಜಿಕಲ್​ ಸ್ಟ್ರೈಕ್​​ ನಡೆದ ಆ ರಾತ್ರಿಯಿಡೀ ಎಲ್ಲವನ್ನೂ ಗಮನಿಸುತ್ತಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುಸೇನೆ ವಾಯುದಾಳಿ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಈ ವಾಯುದಾಳಿಯಲ್ಲೂ ಮನೋಹರ್ ಪರಿಕ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದು ಪಣಜಿಯಲ್ಲಿ ಮನೋಹರ್ ಪರಿಕ್ಕರ್ ಸಂತಾಪ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.

ABOUT THE AUTHOR

...view details