ಕರ್ನಾಟಕ

karnataka

By

Published : Jun 22, 2020, 7:10 PM IST

ETV Bharat / bharat

ಮದುವೆಗೆ ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಕೊಲೆ: ಆರೋಪಿ ಅಂದರ್​​

ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಯುವತಿಯ ಕೊಲೆ ಮಾಡಿದ್ದ ವ್ಯಕ್ತಿ ಅರೆಸ್ಟ್​ ಆಗಿದ್ದು, ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ಘಟನೆ ನಡೆದಿದೆ.

Man stabs and kills girl
Man stabs and kills girl

ಗಾಜಿಯಾಬಾದ್​(ಯುಪಿ): ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೋರ್ವ 19 ವರ್ಷದ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.

ನೈನಾ ಸಿಂಗ್ ಮೃತ ಯುವತಿ. ಕೊಲೆ ಮಾಡಿರುವ ವ್ಯಕ್ತಿಯನ್ನ ಶೇರ್​ ಖಾನ್​ ಎಂದು ಗುರುತಿಸಲಾಗಿದೆ. ಜೂನ್​ 17ರಂದು ಕೃತ್ಯವೆಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಹಿತಿ ನೀಡಿದ ಎಸ್​ಎಸ್​ಪಿ

ಈತನ ವಿಚಾರಣೆ ನಡೆಸಿದಾಗ ಆಕೆಯನ್ನ ಪ್ರೀತಿ ಮಾಡುತ್ತಿದ್ದ ಮಾಹಿತಿ ಹೊರ ಹಾಕಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದಳಂತೆ. ಈ ಹಿಂದೆ ಕೂಡ ಹಲವು ಬಾರಿ ಕಾಲೇಜ್​ನಲ್ಲಿ ಯುವತಿಗೆ ಇದೇ ವಿಷಯವಾಗಿ ಕಿರುಕುಳ ನೀಡಿ, ಯುವತಿ ಕುಟುಂಬಸ್ಥರು ತೊಂದರೆಗೊಳಗಾಗುವಂತೆ ಬೆದರಿಕೆ ಸಹ ಹಾಕಿದ್ದನಂತೆ.

ಜೂನ್​ 17ರಂದು ಇಬ್ಬರ ಜೊತೆ ಸೇರಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಳು.

ABOUT THE AUTHOR

...view details