ಕರ್ನಾಟಕ

karnataka

By

Published : Feb 7, 2020, 7:17 PM IST

ETV Bharat / bharat

ವರದಕ್ಷಿಣೆ ಪಿಶಾಚಿ: ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪಾಪಿ ಪತಿ

ವರದಕ್ಷಿಣೆ ತರುವಂತೆ ಪೀಡಿಸಿ ವ್ಯಕ್ತಿವೋರ್ವ ತನ್ನ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೈತಿ ಶಂಕರ್‌ಪುರ ಗ್ರಾಮದಲ್ಲಿ ನಡೆದಿದೆ.

Man killed wife for dowry in Uttar pradesh
ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

ಲಖನೌ(ಉತ್ತರ ಪ್ರದೇಶ): ವರದಕ್ಷಿಣೆ ತರುವಂತೆ ಪೀಡಿಸಿ ವ್ಯಕ್ತಿವೋರ್ವ ತನ್ನ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೈತಿ ಶಂಕರ್‌ಪುರ ಗ್ರಾಮದಲ್ಲಿ ನಡೆದಿದೆ.

ದೀಪಕ್​ ಎಂಬಾತ ಪತ್ನಿಯನ್ನೇ ಕೊಲೆಗೈದಿರುವ ಆರೋಪಿ. 2017 ರಲ್ಲಿ ದೀಪಕ್, ಪ್ರಜ್ಞಾಳನ್ನು ಮದುವೆಯಾಗಿದ್ದ. ಮದುವೆಯಾದ ಕೆಲ ದಿನಗಳ ನಂತರ ವರದಕ್ಷಿಣೆ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ ಎನ್ನಲಾಗ್ತಿದೆ. ಗುರುವಾರ ದಂಪತಿ ನಡುವೆ ವರದಕ್ಷಿಣೆ ವಿಷಯಕ್ಕೆ ಜಗಳ ನಡೆದಿದ್ದು, ಈ ವೇಳೆ ದೀಪಕ್, ಪ್ರಜ್ಞಾಳನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ದೀಪಕ್​ ಹಾಗೂ ಅತನ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details