ಆಂಧ್ರಪ್ರದೇಶ: ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಡೋಲ್ ಬಳಿ ರಾಜ್ಯ ಸಚಿವ ತಾನೇತಿ ವನಿತಾ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದು 74 ವರ್ಷದ ವೃದ್ಧ ಮೃತಪಟ್ಟಿರುವ ಘಟನೆ ನಡೆದಿದೆ.
ಕೆ. ವೆಂಕಟ್ರಮಣಯ್ಯ ಮೃತ ವೃದ್ಧ. ವಿಜಯವಾಡ ರಾಜ್ಯ ಹೆದ್ದಾರಿಯಲ್ಲಿ ಸಚಿವರ ಕಾರು ತೆರಳುತ್ತಿದ್ದ ವೇಳೆಯಲ್ಲಿ ವೆಂಕಟ್ರಮಣಯ್ಯನವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ರಸ್ತೆ ದಾಟುವ ಸಮಯದಲ್ಲಿ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧ ರಸ್ತೆಗೆ ಬಿದ್ದಿದ್ದಾರೆ.