ಕರ್ನಾಟಕ

karnataka

By

Published : Feb 3, 2020, 2:22 PM IST

ETV Bharat / bharat

ಮುಂಭಾಗಕ್ಕೆ ಹಾನಿ ಮಾಡಿ, ಹೆಲಿಕಾಪ್ಟರ್​​​ ಮುಂದೆ ಧರಣಿ ಕುಳಿತ ಭೂಪ!

ಏಕಾಏಕಿ ವಿಮಾನ ನಿಲ್ದಾಣಕ್ಕೆ ನುಗ್ಗಿರುವ ಭೂಪನೋರ್ವ ಹೆಲಿಕಾಪ್ಟರ್​​​ ಮುಂಭಾಗಕ್ಕೆ ಹಾನಿಗೊಳಿಸಿ, ಧರಣಿ ಕುಳಿತುಕೊಂಡಿರುವ ಘಟನೆ ನಡೆದಿದೆ.

Man Sits In Front Of Plane
ಚಾಪರ್​ ಮುಂಭಾಗಕ್ಕೆ ಹಾನಿ

ಭೋಪಾಲ್​​: ಹಾರಾಟ ನಡೆಸಲು ಸಿದ್ಧವಾಗಿದ್ದ ಚಾಪರ್​​ವೊಂದರ ಮುಂಭಾಗಕ್ಕೆ ಹಾನಿಗೊಳಿಸಿರುವ ವ್ಯಕ್ತಿಯೋರ್ವ ತದನಂತರ ಹೆಲಿಕಾಪ್ಟರ್​​ ಮುಂದೆ ಧರಣಿ ಕುಳಿತುಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ.

ಚಾಪರ್​ ಮುಂಭಾಗಕ್ಕೆ ಹಾನಿ

ಏಕಾಏಕಿಯಾಗಿ ಭೋಪಾಲ್​​ನ ರಾಜಾಭೋಜ್​​​ ಏರ್​ಪೋರ್ಟ್​​ಗೆ ನುಗ್ಗಿರುವ 20 ವರ್ಷದ ಯೋಗೇಶ್​ ತ್ರಿಪಾಠಿ ಚಾಪರ್​ವೊಂದರ ಮುಂಭಾಗಕ್ಕೆ ಹಾನಿ ಮಾಡಿದ್ದಾನೆ. ಇದಾದ ಬಳಿಕ ಹಾರಾಟ ನಡೆಸಲು ಸಿದ್ಧವಾಗಿದ್ದ ಸ್ಪೈಸ್​ ಜೆಟ್​​​​ ಹೆಲಿಕಾಪ್ಟರ್​ ಮುಂದೆ ಧರಣಿ ಕುಳಿತುಕೊಂಡಿದ್ದಾನೆ. ಹೀಗಾಗಿ ಅದು ಒಂದು ಗಂಟೆಗಳ ಕಾಲ ತಂಡವಾಗಿ ಹಾರಾಟ ನಡೆಸಿದೆ.

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಯಾವ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ABOUT THE AUTHOR

...view details